ಆಯ್ರಾ ನಲ್ಲಿ ಟ್ರೆಂಡಿಂಗ್


ಭಾವನೆಗಳ ಸೇತುವೆ "ಸ್ನೇಹ""
ಎರಡು ಮನಸುಗಳ ನಡುವೆ ಭಾವನಾತ್ಮಕ ನಂಟನ್ನು ಬೆಸೆಯುವ "ಸ್ನೇಹ" ಸೃಷ್ಟಿಯ ಒಂದು ಸುಂದರ ಕೊಡುಗೆ ! ಈ ಸುಂದರ ಸಂಬಂಧವನ್ನು ಆಚರಣೆ ಮಾಡಲು ಇದಕ್ಕೆಂದೇ ಒಂದು ಮೀಸಲಾದ ದಿನವನ್ನು ಹೊಂದಿದ್ದಿವೆ ಅದೇ ನಾವಿಂದು ಆಚರಿಸಲ್ಪಡುತ್ತಿರುವ "ಸ್ನೇಹಿತರ ದಿನ"!ಹಾಲ್‌ಮಾರ್ಕ್ ಕಾರ್ಡ್‌ಗಳ ಮಾಲೀಕರಾದ ಜಾಯ್ಸ್ ಹಾಲ್, ಅಮೆರಿಕದಲ್ಲಿ ತನ್ನ ಕಾರ್ಡ್‌ಗಳ ಮಾರಾಟವನ್ನು ಉತ್ತೇಜಿಸಲು 1920 ರಲ್ಲಿ ಸ್ನೇಹ ದಿನದ ಕಲ್ಪನೆಯನ್ನು ಮೊದಲು ಪ್ರಚಾರ ಮಾಡಿದರು. ನಂತರ ವಿಶ್ವಸಂಸ್ಥೆಯು ಜುಲೈ 30ರಂದು ಅಂತರಾಷ್ಟ್ರೀಯ "ಸ್ನೇಹ ದಿನ" ಎಂದು ಗೊತ್ತುಪಡಿಸಿತು. ಆದರೆ ಭಾರತ ಸೇರಿ ಬಾಂಗ್ಲಾ, ಮಲೇಷ್ಯಾ,ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಯುನೈಟೆಡ್ ಸ್ಟೇಟ್ಸ್‌ ಇನ್ನಿತರ ರಾಷ್ಟ್ರಗಳಲ್ಲಿ ಈ ಸ್ನೇಹದ ದಿನವನ್ನು ಆಗಸ್ಟ್‌ನ ಮೊದಲ ಭಾನುವಾರದಂದು ಆಚರಿಸಲಾಗುತ್ತದೆ. ಇನ್ನು ಕೆಲವು ದೇಶಗಳಲ್ಲಿ ಏಪ್ರಿಲ್ ತಿಂಗಳಲ್ಲಿ ಆಚರಿಸಲಾಗುವುದು.ಹೀಗೆ ಒಂದೊಂದು ದೇಶದಲ್ಲಿ ಒಂದೊಂದು ದಿನ ಸ್ನೇಹಿತರ ದಿನವನ್ನು ಆಚರಿಸಲಾಗುವುದು. ಹಾಗಾಗಿ ಸ್ನೇಹಿತರ ದಿನ ಯಾವುದು ಎಂಬ ಬಗ್ಗೆ ಹಲವರಿಗೆ ಗೊಂದಲಗಳಿವೆ. ಈ ಸ್ನೇಹ ದಿನ ವಿವಿಧ ರಾಷ್ಟ್ರಗಳಲ್ಲಿ ವಿಭಿನ್ನ ಇತಿಹಾಸವನ್ನು ಹೊಂದಿದ್ದರೂ ಆಚರಣೆಯ ಉದ್ದೇಶ ಮಾತ್ರ ಒಂದೇ ಎಂಬುದು ಗಮನಾರ್ಹ.ಸ್ನೇಹ ಬಂಧವನ್ನು ಸಂಭ್ರಮಿಸುವ ಸುಂದರ ದಿನವಾಗಿ ಅಂತರಾಷ್ಟ್ರೀಯ ಸ್ನೇಹ ದಿನ ಪರಸ್ಪರ ದೇಶ ದೇಶಗಳ ನಡುವಿನ ಸಂಬಂಧ ಮತ್ತು ವ್ಯಕ್ತಿಗಳ ನಡುವಿನ ಸ್ನೇಹ ಸಂಬಂಧಗಳನ್ನು ಬಿತ್ತಿ ಬೆಳಸಿ ಉತ್ತೇಜಿಸಿ ವೃದ್ಧಿಸುವು ದಲ್ಲದೆ ಜಾಗತಿಕ ಶಾಂತಿ ಮತ್ತು ಸಾಮರಸ್ಯವನ್ನು ಉತ್ತೇಜಿಸುವಲ್ಲಿ ಸ್ನೇಹವು ಹೇಗೆ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ತಿಳಿಸುತ್ತದೆ.ವಿವಿಧ ದೇಶಗಳ ಸ್ನೇಹಿತರೊಂದಿಗೆ ತಿಳುವಳಿಕೆ, ಜ್ಞಾನ ಮತ್ತು ಸಹಾನುಭೂತಿಯನ್ನು ಬೆಳೆಸುವ ಮೂಲಕ ಸದ್ಭಾವನೆಯನ್ನು ಬೆಳೆಸುತ್ತದೆ. ಮತ್ತು ದೇಶ ದೇಶಗಳ ನಡುವಿನ ಸಂಸ್ಕೃತಿಯನ್ನು ಪರಿಚಯಿಸಿ ಅನುಸರಿಸುವಂತೆ ಮಾಡುವುದರ ಜೊತೆಗೆ ಶಾಂತಿ ಸೌಹಾರ್ದಯುತ ಜಗತ್ತನ್ನು ಉತ್ತೇಜಿಸುವಲ್ಲಿ ಸ್ನೇಹವು ನಿರ್ಣಾಯಕ ಪಾತ್ರವನ್ನು ವಹಿಸುವ ಮೂಲಕ ಜಗತ್ತಿಗೆ ಒಂದು ಉತ್ತಮ ಕೊಡುಗೆಯಾಗಿದೆ. ಸ್ನೇಹವೆಂಬುದು ಪ್ರತಿಯೊಬ್ಬರ ಬದುಕಿನಲ್ಲಿ ತುಂಬಾ ಮಹತ್ವವಾದದ್ದುಸ್ನೇಹಿತರು ನಮ್ಮ ಜೀವನದ ಅವಿಭಾಜ್ಯ ಅಂಗವೆನ್ನಬಹುದು ಪ್ರಾಯಶಃ ಸ್ನೇಹಿತರಿಲ್ಲದವರು ಜಗತ್ತಿನಲ್ಲಿ ಯಾರೂ ಇಲ್ಲವೆನ್ನಬಹುದು ಒಳ್ಳೆಯ ಮೌಲ್ಯಯುತ ಸ್ನೇಹದಲ್ಲಿ ಸ್ವಾರ್ಥ ಮೋಸ,ವಂಚನೆ ಮತ್ತು ನಿರೀಕ್ಷೆಗಳು ಇರುವುದಿಲ್ಲ ಅಲ್ಲಿ ಕೇವಲ ಪರಸ್ಪರ ಪ್ರೀತಿ ವಿಶ್ವಾಸ ನಂಬಿಕೆ ಹಾಗೂ ಒಬ್ಬರ ಏಳಿಗೆಯನ್ನು ಮತ್ತೊಬ್ಬರು ಬಯಸುವ ನಿಸ್ವಾರ್ಥದ ಗುಣವಿರುತ್ತದೆ ಹಾಗಾಗಿ ಹೆತ್ತವರು, ಸಂಗಾತಿ ಅಕ್ಕ ತಂಗಿ ಅಣ್ಣ ತಮ್ಮ ಹೀಗೆ ಮನೆ ಮಂದಿಯೊಂದಿಗೆ ಹಂಚಿಕೊಳ್ಳಲಾಗದ ಭಾವನೆಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತೇವೆ, ಅದಕ್ಕಾಗಿಯೇ ಸ್ನೇಹವನ್ನು ರಕ್ತ ಸಂಬಂಧಕ್ಕೂ ಮೀರಿದ ಒಂದು ಪವಿತ್ರ ಹಾಗೂ ಬೆಲೆಕಟ್ಟಲಾಗದ ಬಂಧ ಎನ್ನುವುದು. ನಮ್ಮ ಜೀವನದಲ್ಲಿ ಸ್ನೇಹಿತರು ವಹಿಸುವ ಪ್ರಮುಖ ಪಾತ್ರವನ್ನು ಗೌರವಿಸಲು ಆಚರಿಸಲ್ಪಡುವ ಈ ಸ್ನೇಹ ದೇಶ ಭಾಷೆಗಳು ಜಾತಿಗಳು ಮತ್ತು ಜನಾಂಗಗಳನ್ನು ಮೀರಿದ ಬಂಧವಾಗಿದೆ.ಹಾಗಾಗಿ ಪುರಾಣ ಕಾಲದಿಂದಲೂ ಸ್ನೇಹಕ್ಕಿರುವ ಬೆಲೆ ಬೇರೆ ಯಾವ ಸಂಬಂಧಕ್ಕೂ ಇಲ್ಲ ಎನ್ನಬಹುದು ಸ್ನೇಹವು ಪರಸ್ಪರ ಅಂತರವನ್ನು ನಿವಾರಿಸುತ್ತದೆ, ಮತ್ತು ಸಂಬಂಧಗಳನ್ನು ಪ್ರೀತಿಯಿಂದ ತುಂಬುತ್ತದೆ.ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಕೃಷ್ಣ ಮತ್ತು ಸುಧಾಮ. ಇವರಿಬ್ಬರ ಸಂಬಂಧ ಸ್ನೇಹದ ನಿಜವಾದ ಅರ್ಥವನ್ನು ಸಂಪೂರ್ಣವಾಗಿ ಚಿತ್ರಿಸುತ್ತದೆ. ಅಲ್ಲದೆ ಜಗತ್ತಿಗೆ ಸ್ನೇಹ ಸಂಬಂಧದ ಮೌಲ್ಯವನ್ನು ತಿಳಿದುವುದಕ್ಕೆ ಕೃಷ್ಣ ಸುಧಾಮರ ನಿರ್ಮಲವಾದ ಸಂಬಂಧಕ್ಕಿಂತ ಬೇರೆ ಸಾಕ್ಷಿ ಬೇಕಾಗಿಲ್ಲ.! ಸ್ನೇಹಿತರ ದಿನವೆಂದರೆ ಕೇವಲ ಉಡುಗೊರೆಗಳನ್ನು ಕೊಡುವುದಾಗಲಿ ಕೇವಲ ಪರಸ್ಪರ ಸಂದೇಶಗಳನ್ನು ಕಳುಹಿಸುವುದಲ್ಲ ಇದು ಉಡುಗೊರೆಗಳ ವಿನಿಮಯವನ್ನು ಮೀರಿದ ಎರಡು ಹೃದಯಗಳನ್ನು ಸಂಪರ್ಕಿಸುವ ಸಂಬಂಧಗಳನ್ನು ಬಲಪಡಿಸುವ ಕೊಂಡಿಯಾಗಿ ಸ್ನೇಹ ಸಂಬಂಧದ ಶ್ರೀಮಂತ ಬಂಧವನ್ನು ಆಚರಿಸುವ ದಿನವಾಗಿದೆ.! ಸ್ನೇಹಿತರು ಭಾವನಾತ್ಮಕವಾಗಿ ಬೆಂಬಲವನ್ನು ನೀಡುತ್ತಾರೆ, ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತಾರೆ ಸ್ನೇಹವು ಸಮಯ, ದೂರ ಮತ್ತು ಸಂದರ್ಭಗಳನ್ನು ಮೀರಿದೆ ಹಾಗಾಗಿ ಸ್ನೇಹ ಎನ್ನುವುದು ಸದಾ ನಮ್ಮ ಜೊತೆಯಿರುವ ಇನ್ನೊಂದು ಮನಸ್ಸು, ಬಡವ, ಶ್ರೀಮಂತ, ಮೇಲು-ಕೀಳು, ಸೌಂದರ್ಯ-ಕುರೂಪಿ ಇವುಗಳನ್ನು ನೋಡಿ ಹುಟ್ಟುವುದಿಲ್ಲ. ಎರಡು ಸಮಾನ ಜೀವಗಳು ಪರಸ್ಪರ ಕಷ್ಟ ಸುಖಗಳಿಗೆ ಸ್ಪಂಧಿಸಿದಾಗ ಮಾತ್ರ ಸ್ನೇಹದ ಹುಟ್ಟುವುದು ಸ್ನೇಹಕ್ಕೆ ವಯೋಮಿತಿಯಿಲ್ಲ ಚಿಕ್ಕ ಮಕ್ಕಳಿಗೆ ಅಜ್ಜ ಅಜ್ಜಿಯಷ್ಟು ವಯಸ್ಸಾಗಿರುವವರೂ ಸಹ ಸ್ನೇಹಿತರಾಗಿರುತ್ತಾರೆ.!ಒಬ್ಬರ ಮೇಲೆ ಒಬ್ಬರು ನಂಬಿಕೆ ಇಡುವುದು ನಿಷ್ಠೆಯಿಂದ ಇರುವುದು ಭವಿಷ್ಯದ ದಿನಗಳನ್ನು ಭರವಸೆಯ ದಿನಗಳನ್ನಾಗಿ ಮಾಡಿಕೊಳ್ಳು ವುದೇ ಸ್ನೇಹ. ಹಾಗಾಗಿ ಉತ್ತಮವಾದ ನಂಬುಗೆಯ ಸ್ನೇಹಿತರು ಸಿಗಲು ನಿಜವಾಗಿಯೂ ಪುಣ್ಯ ಮಾಡಿರಬೇಕು. ಆಟ, ಪಾಠ, ಊಟದ ಜೊತೆಗೆ ಸಂತೋಷ, ಸಂಭ್ರಮ, ನೋವು, ನಲಿವುಗಳ ಜೊತೆ ಪ್ರತೀ ವಿಷಯವನ್ನೂ ಜೀವನದ ಪ್ರತಿಯೊಂದು ಕ್ಷಣವನ್ನು ಯಾವುದೇ ಮುಚ್ಚುಮರೆ ಇಲ್ಲದೆ ಹಂಚಿಕೊಳ್ಳುವುದು ಸ್ನೇಹಿತರೊಂದಿಗೆ ಮಾತ್ರ,ಉತ್ತಮ ಸ್ನೇಹ ಬಾಂಧವ್ಯ ಇದ್ದಲ್ಲಿ ಶಾಲಾ ದಿನಗಳಿಂದ ಹಿಡಿದು ಕೊನೆಯ ಉಸಿರಿನ ತನಕ ಸ್ನೇಹಿತರು ನಮ್ಮ ಜೊತೆಗಿರುತ್ತಾರೆ. ನಮ್ಮ ಸಂಬಧಿಗಳಿಗಿಂತ ನಮ್ಮ ಕಷ್ಟದ ದಿನಗಳಿಗೆ ಹೆಗಲು ನೀಡುವವರು ಹೆಚ್ಚಿನ ಸಂಖ್ಯೆಯಲ್ಲಿ ಸ್ನೇಹಿತರೆ ಆಗಿರುತ್ತಾರೆ, ನಮ್ಮನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳುವ ಮತ್ತು ನಮ್ಮ ನ್ಯೂನತೆಗಳ ಹೊರತಾಗಿಯೂ ನಮ್ಮನ್ನು ಸ್ವೀಕರಿಸುವ ಸ್ನೇಹಿತರನ್ನು ನಾವು ಹೊಂದಿದ್ದರೆ, ಜಗತ್ತಿನಲ್ಲಿ ನಾವು ತುಂಬಾ ಅದೃಷ್ಟ ಶಾಲಿ ವ್ಯಕ್ತಿಗಳಾಗಿರುತ್ತೇವೆ. ಭಾರತದ ಗೌರವಾನ್ವಿತ ಮಾಜಿ ರಾಷ್ಟ್ರಪತಿಗಳು ಮತ್ತು ಭಾರತ ರತ್ನ ಪುರಸ್ಕೃತರೂ ಆದ ಡಾ. ಎ. ಪಿ. ಜೆ ಅಬ್ದುಲ್ ಕಲಾಂ ರವರು"ಒಂದು ಉತ್ತಮ ಪುಸ್ತಕ ನೂರು ಸ್ನೇಹಿತರಿಗೆ ಸಮಾನ, ಆದರೆ ಒಬ್ಬ ಉತ್ತಮ ಸ್ನೇಹಿತ ಒಂದು ಗ್ರಂಥಾಲಯಕ್ಕೆ ಸಮಾನ" ಎಂದು ಅದಕ್ಕೇ ಹೇಳಿರುವುದು.!ಗೀತಾಂಜಲಿ ಎನ್,ಎಮ್ಕೊಡಗು
03 Aug '25
3 ನಿಮಿಷದ ಓದು
ಭಾವನೆಗಳ ಸೇತುವೆ "ಸ್ನೇಹ""
ವ್ಯಾಘ್ರ ಸಂತತಿಯನ್ನು ಉಳಿಸೋಣ.
ನಮ್ಮ ದೇಶದ ರಾಷ್ಟ್ರೀಯ ಪ್ರಾಣಿ ಆಗಿರುವ ಹುಲಿ ಗಂಭೀರತೆ ಮತ್ತು ಭವ್ಯತೆಯ ದ್ಯೋತಕವಾಗಿದೆ ! ಅರಣ್ಯ ಸಂಪತ್ತು ಹಾಗೂ ವನ್ಯಜೀವಿಗಳ ಮಹತ್ವದ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿರುವ ಹುಲಿಗಳು ನಮ್ಮ ನಡುವೆ ಇರುವ ವಿಶಿಷ್ಟ ಪ್ರಾಣಿ ಹುಲಿ ಎಂದೊಡನೆ ನಮ್ಮೆಲ್ಲರ ಮನಸ್ಸು ಒಮ್ಮೆಗೆ ಝಲ್ಲೆನ್ನಿಸುತ್ತದೆ ಅಲ್ಲದೆ ಪ್ರತಿಯೊಬ್ಬರೂ ಹುಲಿಯನ್ನು ಒಮ್ಮೆಯಾದರು ಕಾಡಿನಲ್ಲಿ ನೋಡಬೇಕು ಎಂದು ಬಯಸುತ್ತಾರೆ ಅಲ್ಲದೆ ಹುಲಿಯ ಘರ್ಜನೆಯು ಸಹ ಒಂದು ರೀತಿಯ ವಿಭಿನ್ನ ಅನುಭವ ನೀಡುತ್ತದೆ ಅಷ್ಟರ ಮಟ್ಟಿಗೆ ಹುಲಿ ನಮ್ಮನ್ನು ಆಕರ್ಷಿಸುವ ಜೀವಿ. ಆದರೆ ಇತ್ತಿಚಿನ ದಿನಗಳಲ್ಲಿ ಈ ಹುಲಿಗಳ ಸತತಿಯು ಅಳುವಿನಂಚಿನತ್ತ ಸಾಗುತ್ತಿದೆ ಎಂಬುದು ನಿಜಕ್ಕೂ ಬೇಸರದ ಸಂಗತಿ ಈ ನಿಟ್ಟಿನಲ್ಲಿ ಕ್ಷೀಣಿಸುತ್ತಿರುವ ಹುಲಿಗಳ ಸಂಖ್ಯೆಯ ಕುರಿತಾಗಿ ಜನ ಜಾಗೃತಿ ಮೂಡಿಸಲು ಪ್ರತಿ ವರ್ಷ ಜುಲೈ 29 ನ್ನು ಅಂತರಾಷ್ಟ್ರೀಯ ಹುಲಿ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನದ ಮೂಲ ಉದ್ದೇಶ ದಿನೇ ದಿನೇ ಅಳಿವಿನತ್ತ ಸಾಗುತ್ತಿರುವ ಹುಲಿ ಸಂಕುಲನವನ್ನು ಹೇಗೆ ಉಳಿಸಬೇಕು ಇರುವ ಸಂತತಿಯನ್ನು ಹೇಗೆ ರಕ್ಷಿಸಬೇಕು ಹುಲಿ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಹೇಗೆ ಕಾರ್ಯತತ್ಪರ ರಾಗಬೇಕು ಮತ್ತು ಇಳಿಮುಖವಾಗುತ್ತಿರುವ ಹುಲಿಗಳ ಬಗ್ಗೆ ಸಾರ್ವಜನಿಕರಲ್ಲಿ ಹೇಗೆ ಜನಜಾಗೃತಿ ಮೂಡಿಸುವುದು ಮತ್ತು ಹುಲಿಗಳ ಉಳಿಯುವಿಕೆಯನ್ನು ಹೇಗೆ ಉತ್ತೇಜಿಸುವುದು ಎಂಬುದು ಈ ಆಚರಣೆಯ ಪ್ರಮುಖ ಉದ್ದೇಶವಾಗಿದೆ. ಹುಲಿ ದಿನವನ್ನು 2010 ರಲ್ಲಿ ರಷ್ಯಾದ ಸೇಂಟ್ ಪೀಟರ್ಸ್‌ ಬರ್ಗ್ ಹುಲಿ ಶೃಂಗಸಭೆಯಲ್ಲಿ ನಿರ್ದರಿಸಲಾಯಿತು ಈ ಶೃಂಗಸಭೆಯಲ್ಲಿ ಹುಲಿಗಳನ್ನು ಹೊಂದಿರುವ ದೇಶಗಳ ಸರ್ಕಾರಗಳು 2020 ರ ವೇಳೆಗೆ ಹುಲಿಗಳ ಸಂಖ್ಯೆಯನ್ನು ದ್ವಿಗುಣ ಗೊಳಿಸುವುದಾಗಿ ಪ್ರತಿಜ್ಞೆ ಮಾಡಿದವು.ಈ ನಿಟ್ಟಿನಲ್ಲಿ ಸರ್ಕಾರಗಳು ಹುಲಿಸಂರಕ್ಷಣೆ ಕುರಿತು ಚರ್ಚೆ ಉಪನ್ಯಾಸ ಜಾಥಾ,ವಿಚಾರ ಸಂಕಿರಣ,ಛಾಯಚಿತ್ರ ಪ್ರದರ್ಶನದ ಮೂಲಕ ಹುಲಿಗಳನ್ನು ಭೇಟೆಯಾಡದಂತೆ ಹುಲಿಗಳ ರಕ್ಷಣೆಯ ಕುರಿತಾದ ಜನ ಜಾಗೃತಿ ಕಾರ್ಯಕ್ರಮ ಗಳನ್ನು ನಡೆಸಲಾಗುತ್ತಿದೆ. ವಿಶ್ವದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ದೇಶ ನಮ್ಮ ಭಾರತವಾಗಿದೆ ಎಂಬುದು ಹೆಮ್ಮೆಯ ವಿಚಾರ ಭಾರತದಲ್ಲಿ ಸುಮಾರು 3,000 ಕ್ಕಿಂತಲೂ ಹೆಚ್ಚು ಹುಲಿಗಳಿವೆ ಎಂದು ಅಂದಾಜಿಸಲಾಗಿದ್ದು ಭಾರತವು ವಿಶ್ವದ ಶೇಕಡಾ 70 ಕ್ಕಿಂತ ಹೆಚ್ಚು ಹುಲಿಗಳ ನೆಲೆಯಾಗಿದೆ ಎಂಬುದು ಸಂತಸದ ವಿಷಯ.ಭಾರತದ ನಂತರ ರಷ್ಯಾ,ನೇಪಾಳ ಇಂಡೋನೇಷ್ಯಾ, ಮತ್ತು ಥೈಲ್ಯಾಂಡ್ ದೇಶಗಳು ಸ್ಥಾನ ಪಡೆದಿವೆ. ಹುಲಿ ಸಂರಕ್ಷಣೆ ವಿಚಾರದಲ್ಲಿ ಭಾರತ ಮಾತ್ರವಲ್ಲದೇ ಇಡೀ ವಿಶ್ವವೇ ಗಮನ ನೀಡುತ್ತಿದೆ ಏಷಿಯಾದ ಹುಲಿಗಳ ರಕ್ಷಣೆ, ಅದರಲ್ಲೂ ವೈಭವದ ಸಂಕೇತದಂತೆಯೇ ಇರುವ ರಾಯಲ್‌ ಬೆಂಗಾಲ್‌ ಹುಲಿಗಳನ್ನು ಮುಂದಿನ ಪೀಳಿಗೆಗೂ ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಗಳು ನಿರಂತರವಾಗಿ ನಡೆದಿವೆ. ಈ ಹುಲಿಗಳ ಸಂತತಿ ನಶಿಸುತ್ತಿರುವುದಕ್ಕೆ ಹಲವು ಕಾರಣಗಳಿವೆ ಅಕ್ರಮವಾಗಿ ನಡೆಸುತ್ತಿರುವ ವನ್ಯಜೀವಿಗಳ ವ್ಯಾಪಾರ, ಮನುಷ್ಯರ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ಹಾಗೂ ಕಾಡಿನ ನಿರಂತರ ನಾಶದಿಂದಾಗಿ ಹುಲಿಗಳ ಸಂಖ್ಯೆ ದಿನದಿಂದ ದಿನಕ್ಕೆಇಳಿಮುಖವಾಗುತ್ತಿದೆ ಅಲ್ಲದೆ ಬೇಟೆಯಾಡುವುದು ಸಾಂಪ್ರದಾಯಿಕ ಔಷಧ ಮತ್ತು ಅಲಂಕಾರಿಕ ವಸ್ತುಗಳ ಶ್ರೀಮಂತ ಮಾರುಕಟ್ಟೆಯು ಹುಲಿಗಳನ್ನು ಕೊಲ್ಲುವುದನ್ನು ಪ್ರೇರಿಸುತ್ತಿದೆ ಎಂದೇ ಹೇಳಬಹುದು, ಅಲ್ಲದೆ ಕೃಷಿ ಚಟುವಟಿಕೆ ಮತ್ತು ಅಭಿವೃದ್ಧಿ ಹೆಸರಿನಲ್ಲಿ ನಿರಂತರ ಕಾಡುಗಳ ನಾಶ ಮಾನವರು ಮತ್ತು ಜಾನುವಾರುಗಳ ಮೇಲೆ ದಾಳಿಯಿಂದ ಉಂಟಾಗುತ್ತಿರುವ ಹತ್ಯೆಗಳಿಂದ ಹುಲಿಗಳ ಸಂಖ್ಯೆ ಮತ್ತಷ್ಟು ಅಪಾಯಕ್ಕೆ ಸಿಲುಕುತ್ತಿದೆ. ಪ್ರತಿ 4 ವರ್ಷಕ್ಕೊಮ್ಮೆ ಹುಲಿ ಗಣತಿ ಮಾಡಲಾಗುತ್ತಿದ್ದು. 2018ರ ಹುಲಿ ಗಣತಿ ಪ್ರಕಾರ ದೇಶದಲ್ಲಿ ಸುಮಾರು 2967 ಹುಲಿಗಳು ಇವೆಯೆಂದು ವರದಿ ತಿಳಿಸಿತ್ತು ಇತ್ತೀಚಿನ ವರದಿಗಳ ಪ್ರಕಾರ ಭಾರತದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ ಮಧ್ಯಪ್ರದೇಶ ಇಲ್ಲಿ 785 ಹುಲಿಗಳಿವೆ ಎಂದು ವರದಿ ಹೇಳುತ್ತದೆ. ಕರ್ನಾಟಕವು ದೇಶದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಎರಡನೇ ರಾಜ್ಯವಾಗಿದೆ ನಂತರ, ಉತ್ತರಾಖಂಡ್ ಮತ್ತು ಮಹಾರಾಷ್ಟ್ರ ರಾಜ್ಯಗಳು ಹೆಚ್ಚು ಹುಲಿಗಳನ್ನು ಹೊಂದಿವೆ, 2022 ರ ಹುಲಿ ಗಣತಿಯ ಪ್ರಕಾರ, ಭಾರತದಲ್ಲಿ ಒಟ್ಟು 3,167 ಹುಲಿಗಳಿವೆ ಎಂದು ಅಂದಾಜಿಸಲಾಗಿದ್ದು ಹಿಂದಿನ ವರದಿಗೆ ಹೋಲಿಸಿದಾಗ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಖುಷಿಯ ವಿಚಾರವೆನ್ನಬಹುದು. ವಿಶ್ವದಲ್ಲೇ ಅತಿಹೆಚ್ಚು ಹುಲಿಗಳು ಇರುವುದು ಏಷ್ಯಾಖಂಡದಲ್ಲೇ ಎಂಬುದು ಗಮನಾರ್ಹ 2006 ರಿಂದ ಹುಲಿಗಳ ಗಣತಿಯನ್ನು ಮಾಡಲಾಗುತ್ತಿದ್ದು ಈ ಪ್ರಕ್ರಿಯೆ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ವೈಜ್ಞಾನಿಕ ರೀತಿಯಲ್ಲಿ ನಡೆಯುತ್ತದೆ. ನಮ್ಮ ಕರ್ನಾಟಕದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಖ್ಯಾತಿ ಚಾಮರಾಜನಗರ ಜಿಲ್ಲೆಗೆ ಇದೆ. ಎರಡೆರಡು ಹುಲಿ ಸಂರಕ್ಷಿತಾರಣ್ಯ ಹೊಂದಿರುವ ಈ ಚಾಮರಾಜನಗರ ಜಿಲ್ಲೆಯಲ್ಲಿ ಮೊನ್ನೆ ಮೊನ್ನೆಯಷ್ಟೇ ಮಲೆ ಮಹದೇಶ್ವರ ವನ್ಯಧಾಮದಲ್ಲಿ ನಡೆದ ಐದು ಹುಲಿಗಳ ಹತ್ಯಾಕಾಂವಾಗಿದ್ದು ರಾಜ್ಯಕ್ಕೆ ಒಂದು ರೀತಿಯ ಕಪ್ಪು ಚುಕ್ಕಿ ಇಟ್ಟಂತಾಗಿದೆ ಅಲ್ಲದೆ ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ. ಸೃಷ್ಟಿಯಲ್ಲಿ ಮನುಷ್ಯನಷ್ಟೇ ಪ್ರಾಣಿ ಪಕ್ಷಿಗಳಳೂ ಕೂಡ ಬದುಕುವ ಅರ್ಹತೆ, ಅಧಿಕಾರ ಹೊಂದಿವೆ ಆದರೆ ಸ್ವಾರ್ಥ ಮಾನವ ತನ್ನ ದುರಾಸೆಗಾಗಿ ಎಲ್ಲವನ್ನು ತನ್ನ ಅನುಕೂಲಕ್ಕೆ ಬಲಿ ಪಡೆದುಕೊಳ್ಳುತ್ತಿ ರುವುದು ನಿಜಕ್ಕೂ ವಿಷಾದನೀಯ.ಅವುಗಳು ಪ್ರಾಣಿಗಳು ಹಾಗಾಗಿ ಅವುಗಳಿಗೆ ಮನುಷ್ಯ ಜೀವನದ ಬಗ್ಗೆ ಅರಿವಿರುವುದಿಲ್ಲ, ಆದರೆ ಅರಿವಿರುವ ಮಾನವ ಅವುಗಳು ಮಾಡುವ ಹಾನಿಗೆ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕೇ ಹೊರತು ಅವುಗಳನ್ನೇ ಹತ್ಯೆ ಮಾಡುವುದು ಎಷ್ಟು ಸಮಂಜಸ ಅಲ್ಲವೇ, ಹಾಗೆ ಮಾಡಿದರೆ ಪ್ರಾಣಿಗಳಿಗೂ ಮನುಷ್ಯರಿಗೂ ವ್ಯೆತ್ಯಾಸ ಎಲ್ಲಿದೆ ಅಲ್ಲವೇ ? ಈ ನಿಟ್ಟಿನಲ್ಲಿ ಹುಲಿಗಳನ್ನು ರಕ್ಷಿಸುವ ಸರ್ಕಾರದ ಜಾಗೃತಿ ಕಾರ್ಯಕ್ರಮಗಳಿಗೆ ಕೈಜೋಡಿಸೋಣ ಮತ್ತು ಹುಲಿಗಳ ಸಂತತಿಯನ್ನು ರಕ್ಷಿಸೋಣ, ಬೆಳೆಸೋಣ ನಿರಾತಂಕವಾಗಿ ವ್ಯಾಘ್ರಗಳ ಮತ್ತೆ ಘರ್ಜಿಸುವಂತಾಗಲಿ ಎಂದು ಆಶಿಸೋಣ.ಗೀತಾಂಜಲಿ ಎನ್,ಎಮ್
29 Jul '25
3 ನಿಮಿಷದ ಓದು
ವ್ಯಾಘ್ರ ಸಂತತಿಯನ್ನು ಉಳಿಸೋಣ.
ವ್ಯೆದ್ಯರು "ಪ್ರಾಣದಾತರು"
ವೈದ್ಯ ವೃತ್ತಿಯೇ ಹಾಗೆ ತುಂಬಾ ಗೌರವಯುತವಾದದ್ದು! ಕಾರಣ ದೇವರು ಜೀವ ಕೊಟ್ಟರೆ ವ್ಯೆದ್ಯರು ಜೀವವನ್ನು ಉಳಿಸುತ್ತಾರೆ ಹಾಗಾಗಿ ಪ್ರತಿಯೊಬ್ಬರ ಜೀವನದಲ್ಲಿ ಒಬ್ಬೊಬ್ಬ ವ್ಯೆದ್ಯರೂ ಬಹಳ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ಸಮಾಜದಲ್ಲಿ ಬೇರೆಲ್ಲಾ ವೃತ್ತಿಗಿಂತ ಈ ವ್ಯೆದ್ಯ ವೃತ್ತಿಗೆ ಒಂದಿನಿತು ಬೆಲೆ ಹೆಚ್ಚೆಂದು ಹೇಳಿದರೆ ಒಪ್ಪಿಕೊಳ್ಳಲೇಬೇಕು ಕಾರಣ ರೋಗಿಗಳು ಜೀವನ್ಮರಣ ಮದ್ಯ ಹೊರಾಡುವಾಗ ಆ ಅಪತ್ಕಾಲಕ್ಕೆ ಅಪತ್ಪಾಂದವರಾಗಿ ಆ ರೋಗಿಗಳ ಪಾಲಿಗೆ ಕಣ್ಣಿಗೆ ಕಾಣುವ ಸಾಕ್ಷಾತ್ ದೇವರಾಗಿ ಆರೋಗ್ಯ ಹಾಗೂ ಜೀವವನ್ನು ಕಾಪಾಡುತ್ತಾರೆ ಹಾಗಾಗಿಯೇ ವ್ಯೆದ್ಯರನ್ನು 'ವ್ಯೆದ್ಯೋ ನಾರಾಯಣೋ ಹರಿ" ಎಂದು ಕರೆಯುವುದು. ವ್ಯೆದ್ಯರ ಅಮೂಲ್ಯ ಸೇವೆ ಮತ್ತು ದಣಿವರಿಯದ ಅವರ ಕಾಯಕ ಮತ್ತು ಸಮರ್ಪಣೆಯನ್ನು ಗುರುತಿಸಲು ಅವರಿಗಾಗಿ ಒಂದು ದಿನವನ್ನು ಮೀಸಲಿಟ್ಟು ಆಚರಿಸಲಾಗುತ್ತದೆ ಅದನ್ನೇ ವ್ಯೆದ್ಯರ ದಿನವೆಂದು ಕರೆಯಲಾಗುತ್ತದೆ,ಈ ವ್ಯೆದ್ಯರ ದಿನವನ್ನು ಜಗತ್ತಿನಾದ್ಯಂತ ಬೇರೆ ಬೇರೆ ತಿಂಗಳು ದಿನಾಂಕದಂದು ಆಚರಿಸಲಾಗುತ್ತದೆ ಹಾಗೆಯೇ ನಮ್ಮ ಭಾರತದಲ್ಲಿ ಜುಲೈ 1 ರಂದು ನಮ್ಮ ದೇಶದಾದ್ಯಂತ ರಾಷ್ಟ್ರೀಯ ವ್ಯೆದ್ಯರ ದಿನಾಚರಣೆಯನ್ನಾಗಿ ಆಚರಣೆ ಮಾಡಕಾಗುತ್ತದೆ. ಈ ಆಚರಣೆಯ ಮೂಲ ಉದ್ದೇಶ ರೋಗಿಗಳ ಬಗೆಗಿನ ವೈದ್ಯರ ಬದ್ಧತೆಗಳನ್ನು ಶ್ಲಾಘಿಸಲು ಮತ್ತು ಪ್ರಶಂಸಿಸಲು ಅವರ ಸೇವೆಯನ್ನು ಗುರುತಿಸಲು ಹಾಗು ವೈದ್ಯರ ಬಗ್ಗೆ ಮೌಲ್ಯಯುತ ಭಾವನೆ ಮೂಡಿಸಲು ಈ ದಿನವನ್ನುಆಚರಿಸಲಾಗುತ್ತದೆ ಭಾರತದಲ್ಲಿ ವ್ಯೆದ್ಯರ ದಿನ ಬೆಳೆದು ಬಂದ ಇತಿಹಾಸ ನೋಡುವುದಾದರೆ 1948 ರಿಂದ 1962ರವರೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಯಾಗಿದ್ದ ಭಾರತರತ್ನ ಪುರಸ್ಕೃತರಾದ ಡಾ. ಬಿಧಾನ್ ಚಂದ್ರ ರಾಯ್ ರವರು ಒಬ್ಬ ಪ್ರಸಿದ್ಧ ವೈದ್ಯರು, ಶಿಕ್ಷಣತಜ್ಞರು, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸಮಾಜ ಸೇವಕರಾಗಿದ್ದರು ಇವರು ತಮ್ಮ ಅಧಿಕಾರದ ಅವದಿಯಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಅಪಾರವಾದ ಕೊಡುಗೆ ಹಾಗೂ ಅವರ ಸಮರ್ಪಣೆಯನ್ನು ಗುರುತಿಸಿ ಭಾರತ ಸರ್ಕಾರವು 1991ರಲ್ಲಿ ಡಾ ಬಿದನ್ ಚಂದ್ರರಾಯ್ ಅವರ ಜನ್ಮದಿನದ ನೆನಪಿಗಾಗಿ ಜುಲೈ 1ನ್ನು ರಾಷ್ಟ್ರೀಯ ವೈದ್ಯರ ದಿನವೆಂದು ಘೋಷಿಸಿತು.!ವ್ಯೆದ್ಯವೃತ್ತಿ ನಿಜಕ್ಕೂ ಪವಿತ್ರ ಹಾಗೂ ಅದ್ಭುತವಾದದ್ದು ಗುಣಪಡಿಸುವ ಪ್ರತೀ ಕೈಗಳು ಕಾಳಜಿಯುಳ್ಳ ಸಹೃದಯ ಗಳಾಗಿರುತ್ತವೆ ಹಾಗಾಗಿಯೇ ವ್ಯೆದ್ಯರುಗಳು ಸಮಯ, ಹಸಿವು ಸಂತೋಷ ನಿದ್ರೆಗಳಾಚೆ ತಮ್ಮ ಕರ್ತವ್ಯಕ್ಕೆ ಹೆಚ್ಚು ಬದ್ಧರಾಗಿರುತ್ತಾರೆ, ಕೆಲವೊಮ್ಮೆ ತಮ್ಮ ವಯುಕ್ತಿಕ ಜೀವನವನ್ನು ಲೆಕ್ಕಿಸದೆ ನಿಸ್ವಾರ್ಥವಾಗಿ ಸೇವೆಸಲ್ಲಿಸುತ್ತಾರೆ ಸಾವು ಬದುಕಿನ ನಡುವೆ ಹೋರಾಡುವ ರೋಗಿಗಳಿಗೆ ಭರವಸೆ ತುಂಬಿ ಪುನರ್ಜನ್ಮ ಕೊಡುವ ಪ್ರತಿ ವೈದ್ಯರು ನಿಜವಾಗಿಯೂ ದೇವರಿಗೆ ಸಮನಾಗಿರುತ್ತಾರೆ ತಮ್ಮ ಬುದ್ದಿ ಜ್ಞಾನ ಮತ್ತು ಕೌಶಲ್ಯದಿಂದ ಸಮಾಜದಲ್ಲಿ ಗೌರವಿಸಲ್ಪಡುವ ವೈದ್ಯ ವೃತ್ತಿ ಎಷ್ಟು ಶ್ರೇಷ್ಟವೂ ಅಷ್ಟೇ ಕಷ್ಟಕರವೂ ಹೌದು ಎನ್ನಬಹುದು.ಎಷ್ಟೋ ಸಲ ವೈದ್ಯರು ತಮ್ಮ ಸುಖ ಸಂತೋಷಗಳನ್ನು ತ್ಯಾಗಮಾಡಿ ತಮ್ಮ ವೃತ್ತಿಗೇ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕಾಗುತ್ತದೆ. ಅದರಲ್ಲೂ ಕೆಲವೊಂದು ತುರ್ತುಸೇವೆ,ಅಪಘಾತಗಳ ಸಂದರ್ಭ ಬಂದಾಗಲಂತು ತಮ್ಮ ಕುಟುಂಬ ಮನೆ ಮಕ್ಕಳು,ಹಸಿವು ನಿದ್ರೆ ಎಲ್ಲವನ್ನು ಮರೆತು ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ಕೊಡುವ ಮೂಲಕ ರೋಗಿಗಳ ಜೀವವನ್ನು ರಕ್ಷಿಸುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಕೋವಿಡ್ ಸಂಕಷ್ಟದ ಸಮಯದಲ್ಲಿ ವ್ಯೆದ್ಯರುಗಳು ತಮ್ಮ ಜೀವವನ್ನೂ ಲೆಕ್ಕಿಸದೇ ನಿಸ್ವಾರ್ಥತೆಯಿಂದ ಸೇವೆ ಸಲ್ಲಿಸುವುದರ ಜೊತೆಗೆ ಹಲವು ವ್ಯೆದ್ಯರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ ಇಷ್ಟೆಲ್ಲಾ ತ್ಯಾಗ ಸೇವೆಯನ್ನು ಮಾಡುವ ವ್ಯೆದ್ಯರನ್ನು ಪ್ರತಿಯೊಬ್ಬರೂ ಗೌರವಿಸಲೇಬೇಕೇ ಹೊರತು ಚಿಕ್ಕ ಪುಟ್ಟ ವಿಷಯಗಳಿಗೆ ಅಸಹಕಾರ ಮಾಡುತ್ತಾ ಅಗೌರವ ತೋರುತ್ತಾ ಕಿರಿಕಿರಿಯನ್ನುಂಟು ಮಾಡಬಾರದು. ವೈದ್ಯರುಗಳು ಸಮಾಜದ ರಕ್ಷಕರು ಹಗಲಿರುಳು ಕೆಲಸ ಮಾಡುತ್ತಾರೆ ಮತ್ತು ದಿನದ 24 ಗಂಟೆಗಳೂ ರೋಗಿಗಳ ಸೇವೆಗಾಗಿ ಆಸ್ಪತ್ರೆಗಳಲ್ಲಿ ಲಭ್ಯವಿರುತ್ತಾರೆ.ಅಲ್ಲದೆ ವೈದ್ಯಕೀಯ ವಿಜ್ಞಾನ ತಂತ್ರಜ್ಞಾನಗಳೊಂದಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾ ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಾ ಪರಿಹಾರ ಮಾರ್ಗಗಳನ್ನು ಕೊಂಡುಕೊಂಡು ಚಿಕಿತ್ಸಾ ವಿಧಾನವನ್ನು ದಿನದಿಂದ ದಿನಕ್ಕೆ ನವೀಕರಿಸಿಕೊಳ್ಳುತ್ತಾರೆ ಜೊತೆಗೆ ಹೊಸ ಹೊಸ ಚಿಕಿತ್ಸೆಗಳನ್ನು ಕಂಡುಹಿಡಿದು ಎಲ್ಲಾ ತರಹದ ರೋಗಗಳಿಗೆ ಚಿಕೆತ್ಸೆ ಕೊಡುವ ಮೂಲಕ ರೋಗಿಗಳ ಆರೋಗ್ಯವನ್ನು ಕಾಪಾಡುವಲ್ಲಿ ಅವಿರತ ಪರಿಶ್ರಮವನ್ನು ವಹಿಸುತ್ತಾರೆ. ಇಂತಹ ಅದ್ಭುತ ಸೇವೆ ಸಲ್ಲಿಸುವ ವೈದ್ಯರಿಗೆ ನಾವು ನಮ್ಮ ಕೃತಜ್ಞತೆಯನ್ನು ಸಲ್ಲಿಸುವುದರ ಜೊತೆಗೆ ಸದಾ ಅವರ ಸೇವೆಗೆ ಋಣಿಯಾಗಿರಬೇಕು, ಮನುಷ್ಯನಿಗೆ ಎಷ್ಟೇ ಹಣ ಆಸ್ತಿಯ ಸಂಪತ್ತು ಇದ್ದರು ಆರೋಗ್ಯವೆಂಬ ಅತ್ಯಮೂಲ್ಯ ಸಂಪತ್ತು ಇಲ್ಲವಾದರೆ ಎಲ್ಲವೂ ವ್ಯರ್ಥ ಹಾಗಾಗಿ ಆರೋಗ್ಯವೇ ನಿಜವಾದ ಸಂಪತ್ತು, ಅನಾರೋಗ್ಯದ ಸಂಧರ್ಭದಲ್ಲಿ ನಮ್ಮ ಆರೋಗ್ಯವೆಂಬ ಬೆಲೆ ಕಟ್ಟಲಾಗದ ಅಮೂಲ್ಯ ಸಂಪತ್ತನ್ನು ಕಾಪಾಡಿ ಪುನರ್ಜನ್ಮವನ್ನು ಕೊಡುವ ವ್ಯೆದ್ಯರು ನಿಜಕ್ಕೂ ಪ್ರಾಣದಾತರು. ಒಬ್ಬ ಒಳ್ಳೆಯ ವೈದ್ಯ ರೋಗಕ್ಕೆ ಚಿಕಿತ್ಸೆ ನೀಡುತ್ತಾನೆ ಆದರೆ ಒಬ್ಬ ಶ್ರೇಷ್ಠ ವೈದ್ಯ ರೋಗದ ಜೊತೆಗೆ ರೋಗಿಗೂ ಚಿಕಿತ್ಸೆ ನೀಡುತ್ತಾನೆ ಎಂಬ ಮಾತು ಎಷ್ಟು ಅಥಗರ್ಭಿತವಾಗಿದೆ ಅಲ್ಲವೇ, ಒಟ್ಟಿನಲ್ಲಿ ಹೇಳುವುದಾದರೆ ವೈದ್ಯರ ದಿನವು ಕೇವಲ ಒಬ್ಬ ವ್ಯಕ್ತಿಯ ಆಚರಣೆಯಲ್ಲ, ಬದಲಾಗಿ ಪ್ರತೀ ರೋಗಿಗಳನ್ನು ಪ್ರೀತಿ, ಸಹಾನುಭೂತಿ, ಜವಾಬ್ದಾರಿ ಮತ್ತು ಮಾನವೀಯತೆಯಿಂದ ಉಪಚರಿಸುತ್ತ ರೋಗಗಳನ್ನು ಗುಣಪಡಿಸುವ ಎಲ್ಲಾ ವೈದ್ಯರಿಗೂ ಸಲಿಸುವ ಗೌರವ,ವ್ಯೆದ್ಯರಿಗೆ ಎಲ್ಲರೂ ಯಾವಾಗಲೂ ಕೃತಜ್ಞರಾಗಿರಬೇಕು ವ್ಯೆದ್ಯರಿಲ್ಲದೆ ಯಾರೂ ತಮ್ಮ ಮುರಿದ ಮೂಳೆಗಳನ್ನು ಜೋಡಿಸಿಕೊಳ್ಳಲು ಸಾಧ್ಯವಿಲ್ಲ ಆಲ್ಲವೇ? ರಕ್ತದೊತ್ತಡ, ಮೆದುಳು,ಹೃದಯದ ಆರೋಗ್ಯ ಹೀಗೆ ಶರೀರದಲ್ಲಿ ನಿತ್ಯವೂ ಒಂದಿಲ್ಲೊಂದು ಕಾಣಿಸಿಕೊಳ್ಳುವ ಪ್ರತೀ ರೋಗಗಳಿಂದ ವ್ಯೆದ್ಯರ ಹೊರತು ಬೇರಾರು ರಕ್ಷಿಸಲು ಸಾಧ್ಯವಿಲ್ಲ ಅಲ್ಲವೇ? ಅದಕ್ಕೇ ವೈದ್ಯರುಗಳು ಅದ್ಭುತ ಮತ್ತು ನಿಜವಾದ ಸೂಪರ್ ಹೀರೋಗಳು ನಮಗೆ ಕಾಯಿಲೆ ಬಂದಾಗ ತಕ್ಷಣ ಹೋಗುವುದು ವ್ಯೆದ್ಯರ ಬಳಿಗೆ ಹೊರತು ಬೇರೆಲ್ಲೂ ಅಲ್ಲ ಹಾಗಾಗಿ ಅವರನ್ನು ಗೌರವಿಸುವುದು ಎಲ್ಲರ ಆದ್ಯ ಕರ್ತವ್ಯದ ಜೊತೆಗೆ ಅವರಿಗೆ ಸಲ್ಲಿಸುವ ಕೃತಜ್ಞತೆಯೂ ಕೂಡ ಹೌದು, ಈ ನಿಟ್ಟಿನಲ್ಲಿ ನಾವು ಈ ದಿನವನ್ನು ಎಲ್ಲಾ ವ್ಯೆದ್ಯರುಗಳಿಗೆ ಸಮರ್ಪಿಸುತ್ತ ಶುಭಾಶಯಗಳನ್ನು ಸಲ್ಲಿಸೋಣ.ಗೀತಾಂಜಲಿ ಎನ್,ಎಮ್
01 Jul '25
3 ನಿಮಿಷದ ಓದು
ಜಗತ್ತು
ವ್ಯೆದ್ಯರು "ಪ್ರಾಣದಾತರು"

ಸಾಮಾಜಿಕ ಮಾಧ್ಯಮಗಳಲ್ಲಿ ಫಾಲೋ ಮಾಡಿ