ವಿನಾಯಕನೆ ಕರವೆರಡು ಜೋಡಿಸಿ ಶಿರವನು ಬಾಗಿಸಿ ನಮಿಸುವೆನಿದೋ ಗಣನಾಥ ಅಡೆತಡೆಗಳ ನಿವಾರಿಸೋ ವಿಘ್ನೇಶ್ವರ ಗೌರಿತನಯ ಶಿವಸುತನೆ
ನಾರಾಯಣ ಶ್ರೀಹರಿಯೇ ನಿನ್ನ ನಾಮ ಜಪ ಮಾಡುವೆ ಧರೆಯಲಿ ಕರೆಯಾಲಿಸಿ ಕಾಪಾಡೋ ಶ್ರೀಹರಿ ಆದಿದೇವನೆ ಅನಂತಶಯನ ಶ್ರೀ ಲಕ್ಷ್ಮಿರಮಣನೆ
ಕೃಷ್ಣನೆ ಕರುಣಾಳು ಗಿರಿಧಾರಿ ಕಡುಕಷ್ಟಗಳ ಪರಿಹರಿಸಿ ಉದ್ದರಿಸೊ ಮಾಧವ ಗೋಪಾಲಬಾಲ ಮುರಳಿಲೋಲ ಯಶೋದಾತನಯ ವಸುದೇವ ಸುತನೆ
ರಘುಕುಲ ನಂದನ ರಾಮ ಮೊರೆ ಕೇಳಿ ಪೊರೆಯೊ ಮೋಕ್ಷಕಾರಕನೆ ದೊರೆಯೆ ರಕ್ಷಿಸೊ ಕಲಿಯುಗ ದೈವವೆ ಕೌಸಲ್ಯತನಯ ದಶರಥ ಸುತನೆ
ಕಾರ್ತಿಕೇಯನೆ ಸ್ವಾಮಿ ಸುಬ್ರಹ್ಮಣ್ಯ ಭಜಿಸುವೆ ಭವರೋಗಹರನೆ ಸ್ಕಂದನೆ ದುರಿತಗಳ ದೂರ ಮಾಡೋ ಗಣೇಶಗ್ರಜನೆ ಉಮಾಪತಿ ಸುತನೆ
ಗುರುರಾಯ ಪಾದಕೆರಗುವೆ
ಮಂತ್ರಾಲಯವಾಸಿ ಸ್ವೀಕರಿಸಿ ಮಾನಸಪೂಜೆಯ ಅಭಯವನಿತ್ತು ಸಲಹು ತಂದೆ ಕರುಣಾಳು ರಾಘವೇಂದ್ರನೆ
ಪಾಮರಳ ಪ್ರಾರ್ಥಾನೆ
ಓಂ ಶ್ರೀ ಗಣೇಶಾಯ ನಮಃ
ಓಂ ಗಂ ಗಣಪತಯೇ ನಮಃ
ವಿಘ್ನಹರ್ತನ ಚರಣಕೆರಗಿ ಬಾಗಿ ನಮಿಸಿ ಭಕ್ತಿಯಿಂದ ಬೇಡಿಕೊಳ್ಳಿರೋ
ಓಂ ನಮೋ ಭಗವತೆ ವಾಸುದೇವಾಯ
ಹರಿನಾಮ ಸ್ಮರಣೆ ಮಾಡಿ ನರ ಜನ್ಮದ ಪಾಪ ಕಳೆದು ಇಳೆಯಲಿ ಅನುದಿನ ನೆಮ್ಮದಿ ಕಾಣಿರೋ
ಓಂ ಹರ ನಮಃ ಪಾರ್ವತಿ ಪತಯೆ ಶಿವಾಯ ನಮಃ ಹರಹರನೆಂದು ಸ್ತುತಿಸಿ ಹರಣವಾಗಲಿ ಎಲ್ಲಾ ಕ್ಲೇಷ ಸದ್ಗತಿಯ ಪಡೆಯಿರೋ
ಓಂ ಜಗದೀಶ್ವರಿಯೇ ನಮೋಸ್ತುತೆ
ಜಗದಂಬೆಯ ನಂಬಿ ಭಜಿಸಿ ದಮನವಾಗಲಿ ಎಲ್ಲಾ ಕಷ್ಟ ಸುಖವ ಹೊಂದಿರೋ
ಓಂ ಶ್ರೀ ಶಾರದಾಯೆ ನಮೋಸ್ತುತೆ
ಶಾರದೆಯ ದಯೆಯ ಬೇಡಿ ನಮಿಸಿ ವಿದ್ಯಾಬುದ್ದಿಯ ಹೊಂದಿ ಬಾಳಿರೋ
ಓಂ ಶ್ರೀ ಮಹಾಲಕ್ಷ್ಮೈ ನಮಃ
ಮಹಾಲಕುಮಿ ಪಾದಕೆರಗಿ ಬೇಡಿರಿ ದಾರಿದ್ರ್ಯ ನಾಶವಾಗಲಿ ಸಿರಿಯ ಪಡೆಯಿರೋ
ಓಂ ಶ್ರೀ ಆಂಜನೇಯಾಯ ನಮಃ
ರಾಮದೂತನ ಮರೆಯದಲೆ ಪೊಗಳಿ ಆಪತ್ಕಾಲದೆ ನಮ್ಮ ಕಾಯ್ವನೋ
0 Followers
0 Following