ಗೆದ್ದೇ ಗೆಲ್ಲುವೆ ಒಂದು ದಿನ..



image

ತೆವಳಿ-ಎದ್ದು-ಬಿದ್ದು -ನಡಿಗೆ ಕಲಿತು, 

ದಣಿವರಿಯದ  ಪಯಣ ನಿರಂತರವಾಗಿತ್ತು,

ಏನಾದರೂ ಸಾಧಿಸುವ ಛಲವಿತ್ತು, 

ಗೆಲ್ಲಲೇಬೇಕೆಂಬ ತುಡಿತವಿತ್ತು, 

ಏಳು-ಬೀಳಿನ ಜೊತೆಗೆ ನಿತ್ಯ ಪಯಣ, 

ಗುರಿಯ ತಲುಪುವ ಮುಂಚೆ ಎಲ್ಲವೂ ಕಪ್ಪು ಕಾಣ, 

ಗೆಲುವೆಂಬ ಗುರಿಯ ತಲುಪಿದರೆ ಬಾಳು ರಂಗು-ರಂಗಿನ ಬಣ್ಣ, 

ಸೋಲುಗಳು ಪ್ರತಿಕ್ಷಣ-ಪ್ರತಿದಿನ, 

ಸೋಲನುಂಡು ಹೆಚ್ಚಾಗುವುದು ಗೆಲುವಿನ  ಹುಚ್ಚುತನ, 

ತುಂಬಾ-ಬೇಸರ ನೋವುಗಳಿಂದ ನೊಂದ ಮನ, 

ಸೋಲುಗಳೇ ಮೆಟ್ಟಿಲುಗಳು ಎನ್ನುವ ಶ್ರೇಷ್ಠರ ವಚನ, 

ಸೋಲಿಗೂ ಸೋಲಿಸಿ ಗೆಲ್ಲಬೇಕು ಒಳ್ಳೆತನ, 

ಗೆದ್ದೇ ಗೆಲ್ಲುವೆ ಒಂದು ದಿನ... 

 

ಶಾಂತಾರಾಮ ಹೊಸ್ಕೆರೆ, ಶಿರಸಿ

ಉತ್ತರ ಕನ್ನಡ..7676106237

Category:Poem



ProfileImg

Written by ಶಾಂತಾರಾಮ ಹೊಸ್ಕೆರೆ,ಶಿರಸಿ

ಬರಹಗಾರ...