ಜೀವನ ಪರೀಕ್ಷೆ

ನೋವು

ProfileImg
17 Apr '24
11 min read


image

ಕತ್ತಲಿನ ಬದುಕಿನಲ್ಲಿ ಆಕೆ ಎಂದು ಆದರೂ ಬೆಳಕನ್ನು ನೋಡಲು ಸಾಧ್ಯವಿಲ್ಲ ಹಾಗೆಯೇ ಈಕೆಯ ಜೀವನದಲ್ಲಿ ಕಷ್ಟದಲ್ಲೇ ಬಂದ ಈಕೆ ಕಷ್ಟದಲ್ಲೇ ತನ್ನ ಅಂತ್ಯಕಾಣುತ್ತಾಳೆಯೋ ಪಾಪ ನೋಡಿದರೆ ದುಃಖ ಎನಿಸುತ್ತದೆ. 

ದೇವರು ಎಷ್ಟು ಕೆಟ್ಟವರು ಎನಿಸುತ್ತದೆ, ನೋಡುವರಿಗೆ ಆದರೆ ಅವಳು ಎಷ್ಟೇ ಕಷ್ಟ ಬಂದರು ದೇವರ ಮೇಲಿನ ನಂಬಿಕೆ ಎಂದು ಕಮ್ಮಿ ಆಗಲೇ ಇಲ್ಲ.

ಸಂಸಾರಕ್ಕೆ ಬರುವುದಕ್ಕೆ ಮೊದಲು ಅಮ್ಮನ ಮನೆಯಲ್ಲಿ ತಂಗಳ ಅನ್ನ ಊಟದ ಪರಿಸ್ಥಿತಿ ಎದ್ದಿತ್ತು.

ಒಂದು ಗಾದೆ ಇದೆ,ಬಡತನಕ್ಕೆ ಮಕ್ಕಳು ಜಾಸ್ತಿ ಎಂದು ಅವರ ಮನೆಯಲ್ಲಿ ಅಪ್ಪ ಒಂದು ಹೋಟೆಲುಗಳಲ್ಲಿ ಮುಂಜಾನೆ ಬೇಗ ಹೋಗಿ ರಾತ್ರಿ ಮಲಗುವ ಹೊತ್ತಿಗೆ ಬರುವುದು ಎಲ್ಲಿ ಹೆಂಡತಿಯ ಅಮ್ಮನ ಮನೆಯಲ್ಲಿ ಹಾಕಿದ ಚಿನ್ನವನ್ನು ಮಾರಾಟ ಮಾಡಿ ತನ್ನ ಮಕ್ಕಳ ಹೊತ್ತಿಗೆ ಊಟ ಹಾಕುವುದು ಆದರೆ ಅವರ ಮಾಧ್ಯಮ ಮಗಳು ಕೆಲಸ ಎಲ್ಲಾ ಮುಗಿಸಿ ಬರುವಾಗ ಪಾಪ ಈಕೆ ಹೆಣ್ಣುಮಗಳು ಆಗಿದ್ದರಿಂದ ನಾಯಿಗಿಂತ ಕೀಳಾಗಿ ಕಾಣುತ್ತಾ ಇದ್ದರು.

ಅಣ್ಣ ತಮ್ಮ ಹೋಗುವ ಹೊತ್ತಿಗೆ ಅವರ ಸೇವೆ ಮಾಡಬೇಕಿತ್ತು ಆದರೆ ಅವರ ಅಕ್ಕ ಯಾವುದಕ್ಕೆ ಸಹಾಯ ಮಾಡಬೇಕು ಎಂದು ಕೇಳುತ್ತಾ ಇರಲಿಲ್ಲ. ಸಂಜೆಯ ಹೊತ್ತಿಗೆ ಬಿಡಿಕಟ್ಟಿ ಸುಮಾರು 2ಕಿಲೋ ಮೀಟರ್ ದೂರ ನಡೆದುಕೊಂಡು ಹೋಗಿ ಕೊಟ್ಟು ಅಲ್ಲಿ ಆಕೆಗೆ 3ಪೈಸೆ ಕೊಡುವುದನ್ನು ಅಮ್ಮ ನಿಗೆ ಕೊಡಬೇಕು. 

ಸ್ವಲ್ಪ ತಡವಾಗಿ ಬಂದರೆ ಬೆತ್ತದಲ್ಲಿ ಹೊಡೆಯುತ್ತ ಇದ್ದರು. ಆದರೂ ಎಲ್ಲವನ್ನು ಸಹಿಸಿಕೊಂಡು ಇದ್ದಳು ಈಕೆಯ ಮದುವೆ ಸಂದರ್ಭದಲ್ಲಿ ಕಣ್ಣುಕಾಣದ ಹುಡುಗನ ಜೊತೆ ಮದುವೆ ಮಾಡಿ ಜೀವನದಲ್ಲಿ ಇನ್ನೂ ಕಷ್ಟ ಪಡುವಂತಹದ್ದು ಆಯಿತು.

ನಿಜವಾಗಿ ಅವರು ನಮ್ಮ ಮನೆಯ ಜವಾಬ್ದಾರಿಯನ್ನು ತೆಗೆದುಕೊಂಡು ನಡೆಸಬೇಕು ಆದರೆ ಏನು ಮಾಡುವುದು ಎಂದು ಹೇಳಿ ಗಂಡನ ಸಂಪೂರ್ಣವಾದ ತನ್ನ ಮೇಲೆ ಹಾಕಿಕೊಂಡು ರಾತ್ರಿ ಮಲಗಿದರು ನಿದ್ದೆ ಬರದೇ ಒದ್ದಾಡ್ತಾ ಇದ್ದಾಗ ಅಮ್ಮ ಅಪ್ಪ ಹೇಳಿದ್ದು ನೆನಪು ಆಯಿತು ನೀನು ಮುಂದೆ ಅನುಭವಿಸುತ್ತೀಯಾ ಎಂದು ಹೇಳಿದ್ದು ನೆನಪು ಆಗಿ ಯಾರಿಗೂ ತಿಳಿಯದಂತೆ ಜೋರಾಗಿ ಅಳುತ್ತಾ ಇದ್ದಳು. 

ಹೇಗೋ ತನಗೆ ತಾನೇ ಸಮಾಧಾನ ಮಾಡಿಕೊಂಡು ಬಂದು ಮಲಗಿಕೊಂಡು ಈಕೆಗೆ ನಿದ್ದೆ ಬಂದಿತ್ತು. ಮುಂಜಾನೆ ದೇವರಿಗೆ ನಮಸ್ಕಾರ ಮಾಡಿ ಪತಿಯ ಬಳಿ ಸ್ವಾಮಿಗೆ ನಮಸ್ಕಾರ ಮಾಡಿದಾಗ ನಾನು ತಪ್ಪು ಮಾಡಿದೆ ಕಷ್ಟ ಪಡುವಂತೆ ಆಯಿತು ಎಂದು ಹೇಳಿದಾಗ ನಾನು ಕೆಲಸವನ್ನು ಹುಡುಕಿಕೊಂಡು ಬರುತ್ತೇನೆ ಎಂದು ಹೇಳಿ ಮನೆಯಿಂದ ನಗುತ್ತಾ ಇರುವಾಗ ಆ ಊರಿನ ಸಾಹುಕಾರ್ ಅವರು ಬಂದು ಹೇಗೆ ಇದ್ದಿಯಾ ರವಿ ಹೇಗೆ ಇದ್ದಾನೆ? ಎಂದು ಹೇಳಿದಾಗ ಆಕೆಯ ಕಣ್ಣಿನ ಅಂಚಿನಲ್ಲಿ ನೀರುಬಂದಾಗ ಅಳಬೇಡ ನನಗೆ ಒಬ್ಬರು ಪರಿಚಯ ಇದ್ದಾರೆ ಅವರ ಬಳಿ ಕರೆದುಕೊಂಡು ಬಾ ನಾನು ಹೇಳುತ್ತೇನೆ ಎಂದು ಹೇಳಿದಾಗ ಸಂತೋಷ ಆಯಿತು ನಾಳೆ ಕರೆದುಕೊಂಡು ಬರುತ್ತೇನೆ ಎಂದು ಮುಂದೆ ಸಾಗಿದಳು. 

 

ಒಂದು ಕಾರ್ಖಾನೆಗೆ ಕೆಲಸಕ್ಕೆ ಬೇಕು ಎಂದು ಹಾಕಿದ್ದ ಜಾಹಿರಾತು ನೋಡಿ ಅವರ ದೂರವಾಣಿ ಸಂಖ್ಯೆ ಯನ್ನು ಅವರ ಸಾಹುಕಾರ್ ಮನೆಗೆ ಹೋಗಿ ಕೇಳಿದಾಗ ನಿಮಗೆ ಕೆಲಸಕ್ಕೆ ತೆಗೆದುಕೊಂಡು ಸಂಬಳ ಕೊಡುತ್ತೇವೆ ಎಂದು ಹೇಳಿ ಸಂತೋಷ ಎಂದ ನಡೆದ ವಿಷಯ ವನ್ನು ಹೇಳಿದಾಗ ಆಕೆ ತನ್ನ ಮನೆಯವರನ್ನು ಕರೆದುಕೊಂಡು ಹೋದಾಗ ವೈದ್ಯರು ಸಾಧ್ಯವಿಲ್ಲಾ ಎಂದು ಹೇಳಿದಾಗ ಇನ್ನೂ ಅವಳ ಕಣ್ಣಿನಲ್ಲಿ ರಕ್ತವೇ ಬಂದಂತೆ ಆಯಿತು ಪಾಪ ಆದರೂ ಮನೆಗೆ ಬಂದು ದೇವರ ಬಳಿ ನನಗೆ ದುಡಿಯುವ ಶಕ್ತಿ ಕೊಡು ಎಂದು ಹೇಳಿ ಕಾರ್ಖಾನೆಯ ಕೆಲಸಕ್ಕೆ ಹೊರಗಡೆ ಹೋದಾಗ ನಾನು ಹೋಗಿ ಬರುತ್ತೇನೆ ಊಟಕ್ಕೆ ಎಲ್ಲಾ ನಿಮ್ಮ ಬಳಿ ಇಟ್ಟಿದೇನೇ ಎಂದು ಹೇಳಿ ಕೆಲಸಕ್ಕೆ ತೆರಳಿದಳು.

ಅಲ್ಲಿ ಎಷ್ಟು ಕಷ್ಟ ಎಂದರೆ ಆ ದೊಡ್ಡ ಕಲ್ಲುಗಳನ್ನು ಒಡೆದು ಒಂದು ಕಡೆಯಲ್ಲಿ ಹಾಕಿಬರಬೇಕಿತ್ತು. 

ಅವಾಗ ಅಮ್ಮ ಹೇಳಿದ್ದು ನೆನಪು ಆಗ ತೊಡಕಿತು ನೀನು ಮುಂದೆ ಅನುಭವಿಸುತ್ತೀಯಾ ಎಂಬ ಮಾತುಗಳು ಎನಿಸಿ ಒಮ್ಮೆ ಕಣ್ಣಿನ ಅಂಚಿನಲ್ಲಿ ನೀರು ಬಂತು ಅವಾಗ ಅವಳಿಗೆ ಒಬ್ಬರು ಕರೆದಂತೆ ಆಯಿತು ನೋಡಿದಾಗ ಅವಳ ಸಹ ಕೆಲಸಗಾರರು ಬನ್ನಿ ಎಲ್ಲಿ ಮಾಡಬೇಕು ಎಂದು ಹೇಳಿದರು ಕಾರ್ಖಾನೆಯ ಮಾಲೀಕರು 200 ರೂಪಾಯಿಯ ಸಂಬಳ ಕೊಟ್ಟಾಗ ಅವಳು ಕಣ್ಣಿಗೆ ಒತ್ತಿಕೊಂಡು ಮನೆಗೆ ಹೊರಟಳು. 

ಅವಾಗ ಮನೆಗೆ ಹೋದಾಗ ಅವರ ಪತಿ ಅವಳಿಗಾಗಿ ಕಾಯುತ್ತ ಇದ್ದನು ದೂರದಲ್ಲಿ ಬರುವುದನ್ನು ಕಂಡು ಬಾ ಕೆಲಸಮಾಡಿ ಸಾಕು ಆಗಿರುತ್ತದೆ ಬಾ ಸುಧಾರಿಸಿಕೋ ಎಂದು ಹೇಳಿದಾಗ ಆಕೆ ಅವಳ ಸಂಬಳ ಅವರ ಕೈಗೆ ಕೊಟ್ಟಾಗ ಅವನ ಕಣ್ಣಿನಲ್ಲಿ ನೀರು ಬಂದಿದ್ದನ್ನು ಕಂಡ ಆಕೆ ಯಾಕೆ ಅಳುತ್ತಾ ಇರುವುದು ಊಟ ಮಾಡಿದ್ರ ಎಂದು ನೋಡಿದಾಗ........ 

ಹಾಗೆ ಇತ್ತು ಅವಾಗ ನೀವು ಯಾಕೆ ಊಟ ಮಾಡಿಲ್ಲ ಎಂದು ಕೇಳಿದಾಗ ನೀನು ಮಾಡಿಲ್ಲ ಅಲ್ವಾ ನಿನಗೆ ಎಷ್ಟು ಹಸಿವೆ ಆಗಿದೆ ಅಂಥ ನನಗೆ ತಿಳಿದಿದೆ ಒಟ್ಟಿಗೆ ಊಟ ಮಾಡೋಣ ಎಂದು ಹೇಳಿದಾಗ ನಿನ್ನ ಕೈಯಾರ ಊಟ ಮಾಡಿಸು ಎಂದಾಗ ಆತ ಅವಳ ಕೈ ಹಿಡಿದಾಗ ಅವಳ ಕೈನಲ್ಲಿ ಮುಟ್ಟಿದಾಗ ಏನು ಇದು ಇದು ಎಂದು ಹೇಳಿದಾಗ ಕೆಲಸ ಸ್ವಲ್ಪ ಅಷ್ಟೇ ಎಂದಾಗ ನಾನೆ ನಿನಗೆ ಊಟ ಮಾಡಿಸುತ್ತೇನೆ ಎಂದು ಬಾಯಿ ಆ ಮಾಡು ಎಂದು ಹೇಳಿ ಊಟ ಮಾಡಿಸಿದಾಗ ಆಕೆಗೆ ತನ್ನ ಅಮ್ಮ ಒಂದು ದಿನವೂ ಊಟಮಾಡಿಸಿಲ್ಲ. 

ನನಗೆ ತಿಂಗಳ ಅನ್ನವೇ ಗತಿ ಎನಿಸಿದೆ ಈಗ ನಾನು ಗಂಡನ ಕೈನಲ್ಲಿ ಮಾಡುತ್ತಾ ಇದೇನೆ. 

ಎಷ್ಟು ಆದರೂ ಇದೆ ನೀವು ಊಟ ಮಾಡಿಲ್ಲ ಅಲ್ವಾ ನೀವು ಮಾಡಿ ಎಂದು ಹೇಳಿದಾಗ ಇಬ್ಬರು ಊಟ ಮಾಡಿ ಅವರ ಬಾಯಿಯನ್ನು ತೊಳೆದು ಮಲಗೋಣ ಎನ್ನುವಾಗ ಆತನ ಪತಿ ನಿನ್ನ ಮಡಿಲಿನಲ್ಲಿ ಮಲಗುವ ಅಸೆ ಆಗುತ್ತಾ ಇದೆ ಎಂದಾಗ ಆಕೆಗೆ ಸಂತೋಷ ಎಂದ ಬನ್ನಿ ಎಂದು ಮಲಗಿಸಿ ತಾನು ಮಲಗಿಕೊಂಡಳು. 

 

ಆಕೆಗೆ ಕೆಲಸ ವನ್ನು ಮುಗಿಸಿ ಬಂದಿದ್ದು ಒಳ್ಳೆ ನಿದ್ದೆ ಬಂದಿತ್ತು ಆಕೆಗೆ ಮುಂಜಾನೆಯ ಸೂರ್ಯಅವರ ಮೇಲೆ ನೆರಳು ಬೀರುವಾಗ ಇಬ್ಬರಿಗೆ ಎಚ್ಚರವಾಯಿತು. ಅವಳು ನಾನು ಜಳಕ ಮಾಡಿ ಬರುತ್ತೇನೆ ಎಂದು ಹೇಳಿ ಅವರಿಗೆ ಹಲ್ಲು ಉಜ್ಜಿಸಿ ದಿನಪತ್ರಿಕೆ ಕೊಟ್ಟು ಹೋದಳು.

 

ಅವಾಗ ಮನೆಗೆ ಅವರ ಅಮ್ಮ ಅಪ್ಪ ಬಂದರು ಎನಿಸಿ ಯಾರು ಯಾರು ಎಂದು ಕೇಳಿದಾಗ ಅವರು ಮಾತಾಡಲೇ ಇಲ್ಲ. ಜಳಕ ಮುಗಿಸಿ ಬಂದಾ ಆಕೆ ಏನು ಆಯಿತು ಎಂದು ಹೇಳಿದಾಗ ಆಕೆಯ ಪತಿ ಯಾರೋ ಬಂದಂತೆ ಆಯಿತು ಯಾರು ಎಂದು ನೋಡಿದರೆ ಅವರ ಊರಿನ ಜನರು ಬಂದಿದ್ದರು ಶೇಖರ ಅಣ್ಣ ಬನ್ನಿ ಒಳಗಡೆ ಎಂದಾಗ ಅಣ್ಣ ನಿಮ್ಮನ್ನು ಅಣ್ಣ ನನ್ನು ಕರೆದುಕೊಂಡು ಬರಲು ಗಾಡಿ ಕಳಿಸಿದರೆ ಬನ್ನಿ ಎಂದು ಹೇಳಿದಾಗ ಅವಳು ತನ್ನ ಪತಿಯ ಬಳಿ ಹೇಳಿದಾಗ ಬಾ ಹೋಗೋಣ ಎಂದು ಹೊರಡಲು ಸಿದ್ದರಾದರು. 

ದಂಪತಿಗಳು ಒಬ್ಬರು ನಮ್ಮ ಮತ್ತೆ ಮನೆಯನ್ನು ಬಾಗಿಲುಹಾಕಿ ಅವರು ಕಳಿಸಿದ ಗಾಡಿಯಲ್ಲಿ ತನ್ನ ಪತಿಯನ್ನು ನಿಧಾನಕ್ಕೆ ಕೂರಿಸಿ ತಾನು ಕೂತುಕೊಂಡು ಹೊರಡೋಣ ಎಂದು ಹೇಳಿದಾಗ ಆಕೆಯ ಮನಸಿನಲ್ಲಿ ಒಂದು ರೀತಿಯಾದ ಯಾಕೆ ಬರಲು ಹೇಳಿದರು ಎಂದು ಯೋಚನೆ ಮಾಡುವಾಗ........ 

ಅವರುಗಳು ಸಣ್ಣವರು ಇರುವಾಗ ಆಟವಾಡಿದ ಸ್ಥಳವನ್ನು ನೋಡಿ ಶೇಖರ ಅಣ್ಣ ಒಮ್ಮೆ ನಿಲ್ಲಿಸಿ ಎಂದು ಅಲ್ಲಿಗೆ ಹೋಗಿ ತಾನು ಮಾಡಿದ ಗೊಂಬೆಯನ್ನು ಹುಡುಕಿದಳು ಅದು ಸಿಗಲೇ ಇಲ್ಲ ಬೇಜಾರು ಯಿಂದ ಅವಳಿಂದ ಬಂದಳು. 

 

ಅವಾಗ ಮನೆಗೆ ಹೋಗೋಣ ಎಂದು ಹೇಳಿ ಮನೆಗೆ ಇಬ್ಬರು ಮನೆಗೆ ತೆರಳಿದಾಗ ಅಲ್ಲಿ ಸಾವಿರಾರು ಮಂದಿ ಬಂದು ಸೇರಿದರು. ಅವರ ಪತಿಯನ್ನು ಕರೆದುಕೊಂಡು ಮನೆಗೆ ಬಂದಾಗ ಅಲ್ಲಿ ಎಲ್ಲವೂ ಆಶ್ಚರ್ಯವಾದ ಘಟನೆ ಇತ್ತು. ನೋಡಿ ಒಮ್ಮೆ ಅಮ್ಮ ಎಂದು ಎಂದು ಕೂಗಿದಾಗ ಪತಿ ಕೇಳಿದೆನು ಏನು ಏನು ಆಯಿತು ಯಾಕೆ ಅಳುತ್ತಾ ಇದೆಯಾ? ಏನು ಆಯಿತು ಹೇಳು ಎಂದು ಹೇಳಿದಾಗ ಅಮ್ಮ ಅಮ್ಮ ಎಂದು ಅವರನ್ನು ಕೂರಿಸಿ ತಾನು ಅಮ್ಮನ ಬಳಿ ಹೋದಾಗ ಬಂದೇಯ ತಗೋ ಇದು ಎಂದು ಹೇಳಿ ಅವರು ದೇವರ ಬಳಿ ಹೊರಟರು. 

 

ಅವಾಗ ಎಲ್ಲಾ ಸಂಸ್ಕಾರವನ್ನು ಮುಗಿಸಿಕೊಂಡು ಅವರ ಮನೆಗೆ ಹೊರಡಲು ಅವರ ತಂದೆ ಈಗ ಒಂದು ಲೋಟ ಹಾಲು ಕುಡಿದುಹೋಗು ಎಂದು ಹೇಳಿದರು. 

ಆಕೆಗೆ ಯಾಕೆ ರೀತಿಯಾಗಿ ಹೇಳುತ್ತೀರಾ ಎಂದು ಕೇಳಿದಾಗ ನಿನಗೆ ನೆನಪು ಇದೆಯಾ ಅವತ್ತು ಅಂದರೆ ಮುಸಂಜೆಯ ಸಮಯದಲ್ಲಿ ಅಪ್ಪ ಅಮ್ಮ ಅಂದರೆ ನಾನು ನಾವು ಹೀಗೆ ಮಾತಾಡುತ್ತ ಇರುವಾಗ ನಾನು ಮೊದಲು ಹೋಗುತ್ತೇನೆ ಎಂದು........ 

 

ನಾನು ಹೇಳಿದೆ ಅದ್ಕಕೆ ನೀನು ಅಮ್ಮ ಮೊದಲೇ ಹೋಗಲಿ ಎಂದು ಹೇಳಿದೀಯಾ ಅಲ್ವಾ ಈಗ ನಿನಗೆ ಖುಷಿ ಆಗಿರಬೇಕು ಎಂದು ಹೇಳಿದಾಗ ಅಪ್ಪನಿಗೆ ಏನು ಹೇಳದೆ ಹೊರಟಳು. ಅವರ ಅಳಿಯ ಮಾವ ನಾನು ಹೋಗಿ ಬರುತ್ತೇನೆ ಎಂದಾಗ ಅವರನ್ನು ಕರೆದುಕೊಂಡು ಹೋಗಿ ಸುಮಾರು ಹೊತ್ತು ಮಾತಾಡಿ ಕಳಿಸಿದರು.

 

ಆಕೆಗೆ ಅಮ್ಮಮತ್ತೆ ಎಲ್ಲಿ ಎಲ್ಲೋ ಇದ್ದರೆ ಎನಿಸಿ ಒಮ್ಮೆ ಕಣ್ಣಿನ ಅಂಚಿನಲ್ಲಿ ನೀರುಬಂತು. ಅವಾಗ ಶೇಖರ ಅಣ್ಣ ಹೊರೋಡೋಣ ಎಂದಾಗ ಅಣ್ಣ ಎಲ್ಲಿ ಎಂದಾಗ ಅವರ ತಮ್ಮ ಕಾರಿನಲ್ಲಿ ಕೂರಿಸಿದರೆ ನೀವು ಹೋಗಿ ಬನ್ನಿ ಎಂದು ಹೇಳಿ ಆಕೆಗೆ ದೂರದಲ್ಲೇ ನನ್ನ ತವರು ಮನೆ ಚೆನ್ನಾಗಿ ಇರಲಿ ಎಂದು ಹೇಳಿ ತನ್ನ ಪಯಣ ಮುಂದುವರಿಸಿದಳು. 

ಅಮ್ಮ ನೀಡಿದ ಆ ಉಡುಗೊರೆಯನ್ನು ತೆಗೆದುಕೊಡು ಒಮ್ಮೆ ಜೋರಾಗಿ ಅಳುತ್ತಾ ಇರುವಾಗ ಆಕೆಯ ಗಂಡ ಯಾಕೆ ಅಳುತ್ತೀಯಾ ಅಮ್ಮನ ಜಾಗದಲ್ಲಿ ನಾನು ನಿನ್ನನ್ನು ಸಾಕುತ್ತೇನೆ ಅಳಬೇಡ ನನಗೆ ಅಳಬೇಡ ಎಂದು ಆತನ ಕಣ್ಣಿನಲ್ಲೂ ನೀರುಬರಲು ಶೇಖರ ಅಣ್ಣ ಯಾಕೆ ಅಮ್ಮ ಅಳುತ್ತಿರಾ ನಿನ್ನ ಒಳ್ಳೆಯ ಮನಸು ಯಾರಿಗೆ ಸಹ ಅರ್ಥ ಅಗದೇ ಹೋಯಿತು ಎಂದು ಯೋಚನೆ ಮಾಡಬೇಡ ಮುಂದೆ ಒಂದು ದಿನ ಎಲ್ಲವೂ ಸರಿ ಆಗುತ್ತೆ ಎಂದು ಹೇಳಿ ಅವರು ಪಯಣ ಮುಂದುವರಿಸಿದರು. 

 

ಹೀಗೆ ಸಾಗುತ್ತ ಸಾಗುತ್ತಾ ಮನೆಯ ಹತ್ತಿರ ಬಂದಾಗ ಆಕೆಗೆ ಎಚ್ಚರ ಆಯಿತು ಶೇಖರ ಅಣ್ಣ ಮನೆ ಬಂದಿತ್ತು ಎಂದು ಹೇಳಿದಾಗ ಅಣ್ಣನ್ನು ಮನೆಗೆ ಬಿಟ್ಟು ಬಂದೆ ಎಂದು ಹೇಳಿದಾಗ ಆಕೆ ಅವರ ಕೈನಲ್ಲಿ ಅವರ ಬಳಿ ಇದ್ದ ಹಣವನ್ನು ಕೊಡುವಾಗ ಬೇಡ ಮಗಳೇ ನೀನು ಎಲ್ಲಿ ಸಂತೋಷ ಯಿಂದ ಇರು ಎಂದು ಹೇಳಿ ಅವರು ಹೊರಟರು. ಅವಳು ತನ್ನ ಅಮ್ಮನು ಕೊಟ್ಟ ಉಡುಗೊರೆಯನ್ನು ನೇರವಾಗಿ ದೇವರ ಮನೆಯಲ್ಲಿ ಇತ್ತು ಅಲ್ಲಿ ನಮಸ್ಕಾರ ಮಾಡಿ ಬರುವಾಗ ಅವಳಿಗೆ ಕಾರ್ಖಾನೆಯಲ್ಲಿ ಪರಿಚಯವಾದ ಹುಡುಗಿ ಬಂದು ಎಷ್ಟು ದಿನ ಆಯಿತು.......... 

 

ನೀನು ಕೆಲಸಕ್ಕೆ ಬಂದಿಲ್ಲ ಅಲ್ವಾ ಸಾಹುಕಾರಅವರು 1000 ರೂಪಾಯಿಗಳನ್ನು ಕೊಟ್ಟು ಬರಲು ಹೇಳಿದರೆ ತೆಗೆದುಕೋ ನಾಳೆ ಬಾ ಎಂದು ಹೇಳಿದಾಗ ಸ್ವಲ್ಪ ನಿಲ್ಲು ನನ್ನ ಅಮ್ಮ ಪ್ರಸಾದ ಕೊಡುತ್ತೇನೆ ಎಂದು ಅವರ ಮನೆಯಿಂದ ತಂದ ಲಡ್ಡು ಕೊಡಲು ಆಕೆಯ ಪತಿ ನಾನು ಕೊಡುತ್ತೇನೆ ಎಲ್ಲಿ ಇದ್ದಿಯಾ ಎಂದು ಹೇಳಿದಾಗ ಆಕೆಯ ಪರಿಚಯ ಹುಡುಗಿ ಮನದಲ್ಲಿ ಎಷ್ಟು ಕಷ್ಟದ ಜೀವನ ನಡೆಸುತ್ತಾ ಇದೆಯಾ ಎಂದು ಹೇಳಿ ಹೊರಟಳು. 

ಹೀಗೆ ಎಷ್ಟು ದಿನ ಆಯಿತು ಮನೆಯ ಕೆಲಸಗಳು ಹಾಗೆ ಬಾಕಿ ಉಳಿದಿದೆ ಎಂದು ಮನೆಯನ್ನು ತಾನೇ ಕಸಗಳನ್ನು ಗುಡಿಸಿ ಒರೆಸಿ ಊಟಕ್ಕೆ ಸಿದ್ದಮಾಡಲು ಹೋದಾಗ ಗಂಡನ ಬಳಿ ನಿಮಗೆ ಏನು ಆದರೂ ಬೇಕಾ ಎಂದು ಕೇಳಿದಾಗ ನನಗೆ ಊಟ ಬೇಡ ಅಲ್ಲಿ ಮಾಡಿದ್ದೂ ಅಧಿಕ ಆಗಿದೆ ಎಂದು ಹೇಳಿದಾಗ............ 

 

ನಿನಗೆ ಎಂದು ಹೇಳಿದಾಗ ನನಗೆ ಸಹ ಬೇಡ ಎಂದು ಹೇಳಿ ಇಬ್ಬರು ಮಲಗಿಕೊಂಡರು. ಬೆಳಿಗ್ಗೆ ಮುಂಜಾನೆ ಹೊತ್ತಿಗೆ ಕೆಲಸಕ್ಕೆ ಸಿದ್ದವಾಗಿ ನಾನು ಹೋಗಿ ಬರುತ್ತೇನೆ ಎಂದು ಹೇಳಿ ಹೊರಟಾಗ ನೀವು ಊಟಮಾಡಬೇಕು ಎಂದು ಹೇಳಿ ಆಕೆಯ ಪರಿಚಯದ ಹೆಣ್ಣಿನ ಜೊತೇಹೋಗುವುದು ವಾಡಿಕೆ ಆಗಿತ್ತು ಆಕೆ ಏವತ್ತು ಯಾಕೆ ಬಂದಿಲ್ಲ ಎಂದು ಅವರ ಮನೆಗೆ ಹೊರಟಳು........…

ಅವಾಗ ಆಕೆಯ ಪತಿ 1ವರ್ಷಗಳಿಂದ ಮಲಗಿದನು ಆಕೆಗೆ ನೋಡಿ ಕಣ್ಣಿನ ಅಂಚಿನಲ್ಲಿ ಅಳು ಕಂಡು ಬಾರೆ ಹೇಗೆ ಇದೆಯಾ ಸ್ವಲ್ಪ ತಡವಾಯಿತು ಎಂದು ಹೇಳಿದಾಗ ನೀನು ಅಲ್ಲಿ ಎಷ್ಟು ಸಂತೋಷ ಎಂದು ಹೇಳಿದಾಗ ನನ್ನ ನೋವು ನನಗೆ ಇರಲಿ ಎಂದು ನನ್ನ ಮುಖದಲ್ಲಿ ನಗು ಬೀರುತ್ತಾ ಇದೇನೆ ಎಂದು ಹೇಳಿದಾಗ ಆಕೆಗೆ ಜೀವನದ ನೀತಿಯನ್ನು ಕಲಿತಂತೆ ಆಯಿತು ಬಾ ಹೋಗೋಣ ಎಂದು ಹೇಳಿದಾಗ ಕಾರ್ಖಾನೆಯನ್ನು ತಲುಪಿದರು. 

 

ಅಲ್ಲಿ ಕಲ್ಲುಗಳನ್ನು ಒಡೆಯುವಾಗ ಆಕೆಯ ಕೈಗೆ ಬಿದ್ದು ರಕ್ತ ಬಂದಿತ್ತು ಇಲ್ಲಿ ಪತಿಗೆ ಊಟಮಾಡುವಾಗ ನೆತ್ತಿಗೆ ಹೊಯಿತು ನನ್ನ ಎಣಿಸುತ್ತಾ ಇದಾಳೆ ಇರಬೇಕು ಎಂದು ಸುಮ್ಮನ್ನೆ ಊಟ ಮಾಡಿ ಹಾಗೆ ಮಲಗಿಕೊಂಡನು. ಆಕೆಗೆ ಅಲ್ಲಿ ಜೀವ ಹೋಗುವಂತೆ ಆಯಿತು ಆದರೂ ಕಷ್ಟ ಪಟ್ಟು ಕೆಲಸ ಮಾಡಿ ಸಂಜೆ ಮನೆಗೆ ಬರುವಾಗ ಆಕೆ ಬೇಗ ಬೇಗ ಮನೆಗೆ ಸಾಗಿ ಅರಶಿಣ ಕೈಗೆ ಹಚ್ಚಿಕೊಂಡು ನೋವು ಅವರಿಗೆ ತಿಳಿಯಬಾರದು ಎಂದು ಬಟ್ಟೆ ಕಟ್ಟಿಕೊಂಡು ಇದ್ದಳು. 

 

ಪತಿ ಹೇಳಿದರು ಸಾಕಾಗಿದಿಯ ಊಟ ಮಾಡು ಎಂದು ಹೇಳಿದಾಗ ದಿನಂಪ್ರತಿ ನೀನೇ ನನಗೆ ಮಾಡಿಸೋದು ಎಂದು ಹೇಳಿದಾಗ ಅವಳು ಕೈನೋವು ಇದ್ದರು ಇಬ್ಬರು ಊಟ ಮಾಡಿಸುವಾಗ ಆತನ ಕೈಗೆ ಏನೋ ನೀರು ಬಂದ ಹಾಗೆ ಆಯಿತು ನೋಡಿದಾಗ ಅವನು ಮುಟ್ಟಿ ನೋಡಿ ಆತನಿಗೆ ತಿಳಿಯದು ಪಾಪ ಆತನಿಗೆ ಕುರುಡುತನ ಅದರಿಂದ ಆತನಿಗೆ ತಿಳಿಯಿತು ಏನು ಆಯಿತು ಎಂದು ಹೇಳಿದಾಗ ಆತನ ಕಣ್ಣಿನಲ್ಲಿ ಯಾಕೆ ನನ್ನ ಬಳಿ ಹೇಳಿಲ್ಲ ನೀನು ಎಷ್ಟು ಕಷ್ಟ ಅನುಭವಿಸುತ್ತ ಇದ್ದೆಯಾ. 

ಪತಿಯ ಬಳಿ ಮರುಉತ್ತರಿಸಿದಳು ನನಗೆ ಏನು ಆಗಿಲ್ಲ ಸ್ವಲ್ಪ ನೋವು ಆಗುತ್ತಾ ಇದೆ ಎಂದು ಹೇಳಿದಾಗ ಒಂದು ವಿಷಯ ಗೊತ್ತ ನಾನು ಊಟ ಮಾಡುವಾಗ ನನಗೆ ನೆತ್ತಿಗೆ ಹೋಯಿತು ಅವಾಗ ನೀನೇ ಎನಿಸಿದಿಯ ಅಂದುಕೊಂಡೆ ಆದರೆ ಆದರೆ ನನಗೆ ಈಗ ತುಂಬಾ ಬೇಜಾರು ಆಯಿತು ನಾನೆ ನಿನಗೆ ಊಟಮಾಡಿಸುತ್ತೇನೆ ಎಂದಾಗ ಆತ ಆಕೆಯನ್ನು ಹುಡುಕಿದನು ಎಲ್ಲಿ ಬಾಯಿ ಆ ಮಾಡು ನಾನು ಮಾಡಿಸುತ್ತೇನೆ ಎಂದಾಗ ಆಕೆಯು ಸಂತೋಷ ಎಂದ ಇಬ್ಬರು ಊಟ ಮಾಡಿ ಮಲಗಿಕೊಂಡರು. 

ಬೆಳ್ಳಿಗೆ ಹೀಗೆ ಕೆಲಸವನ್ನು ಮಾಡುತ್ತಾ ಇರುವಾಗ ಸಾಹುಕಾರ್ ಮನೆಯಿಂದ ಮಕ್ಕಳು ಬಂದು ಅಮ್ಮ ಅಮ್ಮ ಎಂದು ಕರೆದಂತೆ ಆಯಿತು ಆಕೆಯ ಪತಿ ಆಕೆಯನ್ನು ಕರೆದು ಯಾರೋ ನಿನ್ನನ್ನು ಕರೆದ ಹಾಗೆ ಆಯಿತು ನೋಡು ಎಂದು ಹೇಳಿದಾಗ ನೋಡುತ್ತೇನೆ ಎಂದು ನೋಡಿದಾಗ ಮಕ್ಕಳು ನಿಮ್ಮನ್ನು ನೋಡಬೇಕು ಎಂದು ಅಪ್ಪಾಜಿ ಹೇಳಿ ಕಳಿಸಿದರೆ ಬರಬೇಕು ಎಂದು ಹೇಳಿದಾಗ ಆಕೆಯ ಪತಿ ಹೋಗಿ ಬಾ ಎಂದು ಹೇಳಿದನು ಹಾಗೆ ಆಗಲಿ ಎಂದು ಹೊರಟಳು. 

ಅವರ ಮಕ್ಕಳ ಜೊತೆ ಸಾಹುಕಾರ್ ಮನೆಗೆ ನಡೆದ ಆಕೆ ಸಂತೋಷ ಎಂದ ಅವರು ಹೀಗೆ ನಿನ್ನ ಪತಿಗೆ ಇವರು ಕಣ್ಣು ನೀಡುತ್ತಾರೆ ಎಂದು ಹೇಳಿದಾಗ ವೈದ್ಯರು ನಾನು ನಿಮ್ಮ ಪತಿಯನ್ನು ಪರೀಕ್ಷೆ ಮಾಡುತ್ತೇನೆ ನಾಳೆ ದೊಡ್ಡ ಚಿಕಿತ್ಸೆಗೆ ಕರೆದುಕೊಂಡು ಬಾ ಎಂದು ದೇವರ ದಯೆಯಿಂದ ಎಲ್ಲವೂ ಒಳಿತು ಆದರೆ ಸಾಕು ಎಂದು ನಾನು ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿ ಬರುತ್ತೇನೆ ಎಂದು ಹೊರಟಳು. ಮನೆಗೆ ಬಂದು ಪತಿಯಬಳಿ ಹೇಳುವ ಹೊತ್ತಿಗೆ ಆಕೆಗೆ ತಲೆ ಸುತ್ತು ಬಂದ ಹಾಗೆ ಆಗಿ ಬಿದ್ದಳು ಅವಾಗ ಆಕೆಗೆ ಪತಿಯು ಯಾರಾದರೂ ಬನ್ನಿ ಎಂದು ಬೊಬ್ಬೆ ಹಾಕುವುದನ್ನು ಕಂಡು ಆಕೆಯ ಕಾರ್ಖಾನೆಯ ಗೆಳತಿ ಬಂದಳು ಅಣ್ಣ ಏನು ಆಯಿತು ಅವಳು ತಲೆ ಸುತ್ತು ಬಂದು ಬಿದ್ದಿದಾಳೆ ಎಂದು ಹೇಳಿದಾಗ ಅವಳು ಬನ್ನಿ ಎಂದು ಅವರನ್ನು ಕರೆದುಕೊಂಡು ಹೋಗಿ ಚಾವಡಿ ಕೂರಿಸಿ ತಾನು ನೋಡಲು ಹೋದಾಗ ಆಕೆಯನ್ನು ಪರೀಕ್ಷೆ ಮಾಡಿದಳು ನೋಡಿದಾಗ ಆಕೆಯು ತಾಯಿಯಾಗಿ ಇರುವ ಸುದ್ದಿ ಕೇಳಿ ಪತಿಗೆ ಸಂತೋಷ ಎಂದ.......…

 

ಆಕೆಯನ್ನು ಮಾತನಾಡಿಸಲು ಹೋದಾಗ ಅಕೆಗೇ ಕಣ್ಣಿನಲ್ಲಿ ನೀರು ಬಂತು ಯಾಕೆ ಅಳುತ್ತೀಯಾ ಎಂದು ಹೇಳಿದಾಗ ಆಕೆ ನಮ್ಮ ಹಾಗೆ ಕಷ್ಟ ಪಡುವುದಕ್ಕೆ ಇನ್ನೊಂದು ಕೂಸು ಬರುತ್ತಾ ಇದೆ ಎಂದು ಹೇಳಿದಾಗ ಹಾಗೆ ಏನು ಇಲ್ಲ. ಎಲ್ಲಾ ದೇವರ ದಯೆ ಎಂದು ತಿಳಿ ಎಂದು ಹೇಳಿದಾಗ ಸಾಹುಕಾರ್ ಏನು ಹೇಳಿದರು ಎಂದಾಗ...…

ಅವರು ನಿಮಗೆ ಕನ್ನುನೀಡಲು ಒಬ್ಬರು ಬಂದಿದ್ದಾರೆ ನಾಳೆ ವೈದ್ಯರು ಚಿಕಿತ್ಸೆಗೆ ಬರಲು ಹೇಳಿದರೆ ಎಂದು ಹೇಳಿದಾಗ ಆತ ನನ್ನನು ದೇವರ ಕೋಣೆಗೆ ಕರೆದುಕೊಂಡು ಹೋಗು ಎಂದು ಹೇಳಿದಾಗ ಅವಳು ಆತನನ್ನು ಕರೆದುಕೊಂಡು ಹೋಗುವಾಗ ದೇವರ ಬಳಿ ಒಂದು ಕೇಳಿದ್ದು ನನ್ನ ಸಣ್ಣ ಅಸೆಯನ್ನು ಈಡೇರಿಸಲಿ ಎಂದು ಹೇಳಿ ಆತನು ದೇವರಿಗೆ ನಮಸ್ಕಾರ ಮಾಡಿ ಚಿಕಿತ್ಸೆಗೆ ಹೋದಾಗ........…

ಅವರ ಪರಿಚಯ ವಾಗಿ ಇವರೇ ನಿಮಗೆ ಕಣ್ಣು ಕೊಡುವವರು ಎಂದಾಗ ಯಾರು ಯಾರು ಎಂದು ಗುರುತಿಸಲು ಆ ಸಂದರ್ಭದಲ್ಲಿ ವೈದ್ಯರು ಇಬ್ಬರು ಬನ್ನಿ ಎಂದು ಕರೆದರೂ ಇಬ್ಬರು ವೈದ್ಯರ ಬಳಿ ಹೋದರೆ ಈಕೆ ದೇವರಲ್ಲಿ ಪ್ರಾಥನೆ ಮಾಡುತ್ತಾ ಇದ್ದಳು. ವೈದ್ಯರು ಬಂದು ಅವಳ ಮುಖದಲ್ಲಿ ಭಯವನ್ನು ಕಂಡು ಏನು ಆಗಿಲ್ಲ ಎರಡು ದಿನಗಳ ನಂತರ ಕಣ್ಣಿನ ಬಟ್ಟೆ ತೆಗೆದು ಬಿಡುತ್ತೇನೆ ಎಂದು ಹೇಳಿದಾಗ ಆಕೆ ಆಯಿತು ಎಂದು ಹೇಳಿ ಇಬ್ಬರಿಗೆ ಊಟ ಮಾಡಿ ಬರುತ್ತೇನೆ ಎಂದು ಹೇಳಿ ಮನೆಗೆ ಹೋಗಿ ಕಾರ್ಖಾನೆಯ ಕೆಲಸಕ್ಕೆ ಹೋಗಿ.......…

 

ಅಲ್ಲಿಂದ ಮನೆಗೆ ಬಂದು ಅಡುಗೆ ಮಾಡಿ ಚಿಕಿತ್ಸೆಗೆ ತೆರಳಿದಳು ಅವಾಗ ವೈದ್ಯರು ಹೇಳಿದರು ನಿಮ್ಮ ಪತಿಗೆ ಕಣ್ಣು ಕಾಣುತ್ತೆ ಎಂದು ಹೇಳಿದಾಗ ಸಂತೋಷ ಎಂದ ಹೋದಾಗ ಆಕೆಯ ಪತಿ ಯಾರು ನನಗೆ ಕೊಟ್ಟಿದ್ದು ಎದ್ದು ಹೇಳು ಎಂದು ಹೇಳಿದಾಗ ನನಗೆ ಗೊತ್ತಿಲ ಸಾಹುಕಾರ್ ಅವರು ಹೇಳಿದ್ದು ಎಂದು ಹೇಳಿದಾಗ ನೋಡೋಣ ಎಂದು ಹೋದಾಗ ಅವರ ಸ್ವಂತ ತಮ್ಮ ತನ್ನ ಕಣ್ಣುಗಳನ್ನು ನೀಡಿದ್ದನ್ನು ನೋಡಿ ಅಣ್ಣ ಎಂದು ಹೇಳಿದಾಗ ಆಕೆಗೆ ಒಮ್ಮೆ ಇಬ್ಬರ ಮುಖವನ್ನು ನೋಡಿದರು. 

ಅವರ ಪತಿಯವರು ಮೊದಲು ನಾವು ನಿಮ್ಮ ತವರು ಮನೆಗೆ ಹೋಗಿ ಅವರಿಗೆ ವಿಷಯಗಳನ್ನು ಹೇಳ್ಬೇಕು ಎಂದು ಹೇಳಿದಾಗ ಅಗತ್ಯವಾಗಿ ಹೋಗಿ ಬರೋಣ ಎಂದು ಹೇಳಿ ಅವಳ ಮುಖದಲ್ಲಿ ಎಷ್ಟು ಸಂತೋಷ ಎಂದರೆ ಮುದುಡಿದ ಹೂವಿಗೆ ನಾವು ನೀರು ಹಾಕಿದಾಗ ಅದು ಚಿಗುರುವಂತೆ ಅವಳು ಬಸ್ ನಲ್ಲಿ ಕಾಯುತ್ತ ಇರುವಾಗ ಅದೇ ಮಾರ್ಗದಲ್ಲಿ ಅವರ ಗೆಳತಿಯ ಗಂಡ ಏನು ನೀವು ಎಲ್ಲಿ ಎಂದು ಕೇಳಿದಾಗ........…

 

ನಮ್ಮ ತವರು ಮನೆಗೆ ಹೊರಟೆವು ಎಂದು ಹೇಳಿದಾಗ ನಾವು ಅದೇ ಮಾರ್ಗದಲ್ಲಿ ಹೋಗುವುದು ಎಂದು ಹೇಳಿದಾಗ ಬೇಡ ಪರವಾಗಿಲ್ಲ ನಾವು ಬಸ್ ನಲ್ಲೆ ಹೋಗುತ್ತೇವೆ ಎಂದು ಹೇಳಿದಾಗ ಬಸ್ ನ ಶಬ್ದವನ್ನು ಕೇಳಿ ಅವರು ಇಬ್ಬರು ಹತ್ತಿ ಕುಳಿತರು. 

 

ಅವಾಗ ಯಾಕೆ ರೀತಿಯಾಗಿ ಮಾಡಿದೀಯ ನೀನು ಮಾಡಿದ್ದೂ ಸರಿನಾ ಎಂದು ಕೇಳಿದಾಗ ಆಕೆ ನಾನು ಮಾಡಿದ್ದೂ ಸರಿ ಎಂದು ಹೇಳಿದಾಗ ಹೌದಾ ಹೇಗೆ ಎಂದು ಕೇಳಿದಾಗ ನಾವು ಇಬ್ಬರ ಸಹಾಯ ಹಸ್ತವನ್ನು ಪಡೆಯಬಾರದು ಎನ್ನುವುದು ನನ್ನ ಅಭಿಪ್ರಾಯ ಎಂದಾಗ ನನಗೆ ಅರ್ಥವಾಯಿತು ಈಗ ಎಂದು ಹೇಳಿದಾಗ ಎಷ್ಟು ಒಳ್ಳೆಯ ಮನಸ್ಸು ನಿನಗೆ ಎಂದು ಹೇಳಿದಾಗ ಅವರ ಮನೆಯ ಮುಂದೆ ಜಾಗ ಬಂದಿತ್ತು ಇಳಿಯಿರಿ ಎಂದು ಹೇಳಿದಾಗ ಅವರು ಇಳಿದರು. 

ಆಕೆಗೆ ಕಣ್ಣುಸನ್ನೆ ಮಾಡಿ ಅಳಬೇಡ ಎಂದು ಹೇಳಿದರು. ಅವಳು ಸುಮ್ಮನ್ನೆ ಮನೆಗೆ ಕರೆದುಕೊಂಡು ಹೊರಟರು. ಅವಾಗ ಶೇಖರ್ ಅಣ್ಣ ಇಡೀ ಊರಿಗೆ ಅವಳು ತಾಯಿಯಾಗುತ್ತ ಇರುವ ಸುದ್ದಿ ಹೇಳಿ ಊರಿಗೆ ಊಟ ಹಾಕಿಸಬೇಕು ಎಂದು ಹೇಳಿದಾಗ ಅವರ ತಂದೇ ಬೇಡ ಹಾಗೇನು ಬೇಡ ಎಂದು ಹೇಳಿದಾಗ ಶೇಖರ್ ಅಣ್ಣನ ಹೆಂಡತಿ ಸಿಹಿಯನ್ನು ತಂದು ಬಾಯಿಗೆ ಹಾಕಿದಳು ಅವಾಗ ಅತ್ತಿಗೆ ಬನ್ನಿ ಒಳಗಡೆ ದೇವರಿಗೆ ನಮಸ್ಕಾರ ಮಾಡೋಣ ಎಂದು ಹೇಳಿ ಅವರನ್ನು ಕರೆದುಕೊಂಡು ಹೊರಟರು ಇಟ್ಟ ಶೇಖರ್ ಅಣ್ಣ ಅಪ್ಪ ನಮ್ಮವರು ಒಟ್ಟಿಗೆ ಮಾತುಗಳನ್ನು ಆಡುತ್ತ ಇದ್ದರು. ನಾವು ಅತ್ತಿಗೆ ದೇವರ ಬಳಿ ಅವಳು ಕೇಳಿದ್ದು ಒಂದೇ ಎಲ್ಲರಿಗೂ ಒಳ್ಳೇದು ಮಾಡಲಿ ಎಂದು ಅವಾಗ ನಿನ್ನ ಎಂಥ ಒಳ್ಳೆಯ ಮನಸ್ಸು ಯಾರಿಗೆ ಸಹ ಎಲ್ಲಾ ಅದು ಬಿಡು ನಿನಗೆ ಆಸೆಗಳು ಆಗುತ್ತೆ ಎಂದು ನಾನು ನನ್ನ ಕೈಯಾರೆ ರವೆ ಉಂಡೆ ಮಾಡಿದೆನೆ ಬಾ ಎಂದು ಕರೆದುಕೊಂಡು ಹೋಗಿ ಉಂಡೆಯನ್ನು ತಿನಿಸುವಾಗ ಆಕೆಗೆ ಅತ್ತಿಗೆ ಅಮ್ಮ ನ ತರಹ ಕಂಡು ಅಮ್ಮ ಅಮ್ಮ ಎಂದು ಹೇಳಿದಾಗ ಅತ್ತಿಗೆಯ ಕಣ್ಣಿನ ಅಂಚಿನಲ್ಲಿ ನೀರು ಬಂತು. 

ಅವಾಗ ಸಾಹುಕಾರ್ ನಾನೆ ಅವಳ ಶ್ರೀಮಂತ ಮಾಡುತ್ತೇನೆ ಎಂದು ಹೇಳಿದಾಗ ಬೇಡ ನಿಮಗೆ ಸುಮ್ಮನ್ನೆ ಯಾಕೆ ತೊಂದ್ರೆ ಎಂದು ಹೇಳಿದಾಗ ನನಗೆ ಮಗಳು ಎದ್ದಿದರೆ ಅವಳಿಗೆ ಮಾಡುತ್ತಾ ಇದ್ದೆ ಈಗ ನನಗೆ ಎಲ್ಲಾ ನಿನ್ನ ಮಗಳು ಎಂದು ಹೇಳಿದಾಗ ನಾನು ನನ್ನ ತವರು ಮನೆಗೆ ಹೇಳಿ ಬರುತ್ತೇನೆ ಎಂದು ಹೇಳಿದಾಗ ಅವರ ಶೇಖರ ಅಣ್ಣ ಅತ್ತಿಗೆ ಎಲ್ಲರೂ ಬಂದಿದ್ದರು. 

ಅವಾಗ ಅವಳಿಗೆ ಎಲ್ಲಾ ಒಳ್ಳೆರೀತಿಯಲ್ಲಿ ಪೂಜೆ ಎಲ್ಲಾ ಮಾಡಿದಾಗ ಆಕೆಗೆ ಅಮ್ಮನ ನೆನಪು ಆಗಿ ಅಮ್ಮ ಇರಬೇಕಿತ್ತು ಎಂದು ಹೇಳಿದಾಗ ನಿನಗೆ ಒಂದು ಉಡುಗೊರೆ ಕೊಡುತ್ತೇನೆ ಎಂದು ಅವರ ಪಾಲಿಗೆ ಅಂದರೆ ನಿನ್ನ ಪಾಲಿನ ಆಸ್ತಿ ನಿನಗೆ ಕೊಡಲು ಬಂದಿದೆವೆ ಎಂದು ಅಪ್ಪ ಹೇಳಿದಾಗ ಯಾಕೆ ರೀತಿ ಮಾಡಿರಿ ಎಂದು ಕೇಳಿದಾಗ ನನ್ನ ಕಾಲ ಮುಗಿತು ಎಂದು ಹೇಳಿದಾಗ ನನಗೆ ಬೇಡ ಎಂದು ಹೇಳಿದಳು.

ನೀವು ಯಾಕೆ ಹಾಗೆ ಹೇಳುತ್ತೀರಾ ನೀವು ನೂರಾರು ವರ್ಷಗಳ ಕಾಲ ಒಳ್ಳೆ ರೀತಿ ಇದ್ದು ನಮ್ಮನ್ನು ಮೊಮ್ಮಕ್ಕಳನ್ನು ನಿಮ್ಮ ತೊಡೆಯ ಮೇಲೆ ಮುದ್ದಬೇಕು ಎಂದು ಹೇಳಿದಾಗ ಹ ಎಂದು ಹೇಳಿ ಊಟ ಮಾಡಿ ಬರುತ್ತೇವೆ ಎಂದು ಹೊರಟರು. ಊರಿನಲ್ಲಿ ಎಲ್ಲರಿಗೂ ಖುಷಿ ಖುಷಿ ಆಕೆಯ ಕಾರ್ಖಾನೆಯ ಗೆಳತಿ ಸಂತೋಷ ಎಂದ ಒಳ್ಳೆಯ ಆರೋಗ್ಯವಂತ ಗಂಡು ಮಗನಿಗೆ ಜನ್ಮ ನೀಡಿ ಎಂದು ಹೇಳಿದಾಗ ಆಕೆ ಯಾವ ಮಗುವು ಜನಸಿದರು ಖುಷಿ ನನಗೆ ಎಂದು ಹೇಳಿದಾಗ ಆಕೆ ಹೌದು ಎಂದು ಎಲ್ಲರೂ ಊಟಕ್ಕೆ ಹೊರಡಲು ಈಕೆ ಅಮ್ಮನ ಉಡುಗೊರೆಯ ಜೊತೆ ಅಮ್ಮ ನಿನ್ನ ಮಗಳು ಈಗ ತಾಯಿ ಆಗುತ್ತಾ ಇದ್ದಾಳೆ ನನಗೆ ಆಶೀರ್ವಾದವಾದ ಮಾಡು ನನಗೆ ತಾಯಿಯ ಪ್ರೀತಿ ಹೇಗೆ ಇದೆ ಎಂದು ಸವಿಯಲು ದೊರಕಲಿಲ್ಲ. ನನಗೆ ನಿನ್ನ ಮಡಲಿನಲ್ಲಿ ಒಂದು ದಿನವೂ ದೊರಕಲಿಲ್ಲ ಈಗ ನನಗೆ ನಾನೆ ಸಮಾಧಾನ ಮಾಡಿಕೊಳ್ಳುವ ಪರಿಸ್ಥಿತಿಬಂದಿದೆ ನಾನೇ ನಿನ್ನ ಜೊತೆಗೆ ಬರುತ್ತೇನೆ ಎಂದು ಹೇಳುವಾಗ ಆಕೆಯ ಗಂಡ ಎಲ್ಲಿ ಹೋದಳು ಎಂದು ಹುಡುಕಿಕೊಂಡು ಬಂದರು.

ಆಕೆಯ ನೆನಪು ಆತನಿಗೆ ಸದಾ ಇದ್ದರು ತಾನು ಕಾರ್ಖಾನೆಯ ಕೆಲಸದಲ್ಲಿಯೇ ಇಟ್ಟುಕೊಂಡು ಆ ಮಗುವನ್ನು ನೋಡಿಕೊಳ್ಳುತ್ತಾ ಎದ್ದನು.

ಇದನ್ನು ಕಂಡು ತಾನು ನೋಡಿಕೊಳ್ಳುತ್ತೇನೆ ಎಂದು ಸಾಹುಕಾರ್ ಅವರು ಹೇಳಿದಾಗ ನಿಮಗೆ ಯಾಕೆ ತೊಂದ್ರೆ ಎಂದು ಕೇಳಿದಾಗ ಶೇಖರ್ ಅಣ್ಣ ಹೇಳಿದರು ನಾವು ನಮ್ಮ ಊರಿಗೆ ಕರೆದುಕೊಂಡು ಹೋಗೋಣ ಎಂದು ಹೇಳಿದಾಗ ಬೇಜಾರು ಮಾಡಿಕೊಳ್ಳಬೇಡಿ ಸ್ವಲ್ಪ ದಿನ ಅವರ ಬಳಿ ಇರಲಿ ಎಂದು ಹೇಳಿದಾಗ ಪರವಾಗಿಲ್ಲ ಎಂದು ಹೇಳಿದರು ಹೀಗೆ ಅವರ ಮನೆಯಲ್ಲಿ ಆ ಮಗು ದಿನಯಿಂದ ದಿನಕ್ಕೆ ಮಗು ದೊಡ್ಡದಾಗುತ್ತ ಬಂದಿತ್ತು. 

ಮುಂದೆ ಆ ಮಗುವನ್ನು ವಿದ್ಯಾಭ್ಯಾಸಕ್ಕೆ ಅವರ ಅಪ್ಪನ ಬಳಿ ಬಿಟ್ಟುಬರಲು ಆ ಮಗು ಅಮ್ಮ ಎಲ್ಲಿ ಎಂದು ಕೇಳಿದಾಗ ನಡೆದ ವಿಷಯವನ್ನು ಅರಿತುಕೊಂಡು ಆ ಮಗುವಿನ ಮುಖವನ್ನು ಆತನು ಕಂಡು ಅಳಬೇಡ ಮಗು ನಾನು ಇದೇನೆ ನಿನಗೆ ನಾನು ಇದೇನೆ ನಿನ್ನ ಸಂಪೂರ್ಣ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ ಎಂದು ಮುಂದೆ ಸಾಗುತ್ತಾರೆ. 

ಮಗುವು ಕಲಿತು ಅರಿತುಕೊಂಡು ಸಮಾಜದಲ್ಲಿ ಒಬ್ಬ ಒಳ್ಳೆಯ ಪ್ರಜೆಯಾಗಿ ರೂಪುಗೊಂಡಿದ್ದನ್ನು ಆಕೆ ಇದ್ದಿದರೆ ಎಷ್ಟು ಸಂತೋಷ ಪಡುತ್ತಾ ಇದ್ದಳು. ಇದು ಹೇಳಿದಾಗ ಆಕೆ ನಮ್ಮ ಜೊತೆ ಸದಾ ಇದ್ದಾರೆ ಯಾಕೆ ಅಂದರೆ ಅವರ ಅಮ್ಮ ಕೊಟ್ಟ ಉಡುಗೊರೆ ಯನ್ನು ನಮಗೆ ಇಟ್ಟು ಹೋಗಿದಾರೆ ಅದರಲ್ಲಿ ಅವಳ ಮುಖದಲ್ಲಿ ನಗು ಅಳುವನ್ನು ಕಾಣಬೇಕು...... 

ಎಂದು ಹೇಳಿದಾಗ ಸಾಹುಕಾರ್ ಬಂದವರು ನೀನು ಯಾಕೆ ಇನ್ನೊಂದು ಮದುವೆ ಆಗಬಾರದು ಎಂದು ಕೇಳಿದಾಗ ಎಲ್ಲಾ ನನ್ನ ಜೀವನದಲ್ಲಿ ಒಬ್ಬಳೇ ಅವಳೇ ಸಪ್ನ ನನಗೆ ಅವಳು ಬೇಕು ಎಂದು ಹೇಳಿದಾಗ ನಿನ್ನ ಇಷ್ಟ ಬಂದ ಹಾಗೆ ಮಾಡು ಎಂದು ಹೇಳಿದರು  ಹೀಗೆ ಆಕೆಯ ನೆನಪಿಗಾಗಿ ಮನೆಯ ತೋಟದಲ್ಲಿ ಅವಳ ಅಮ್ಮ ಕೊಟ್ಟ ಉಡುಗೊರೆ ಜೊತೆಯಲ್ಲಿ ಅವಳ ಶವವನ್ನು ಇಟ್ಟು ಸಮಾಧಿ ಮಾಡಿದರು ಅವನ ಅವಳ ಜೀವನವು ಮಾನಸಿಕವಾಗಿ ಒಂದಾದರು. 

 

Category:Parenting and Family



ProfileImg

Written by vaishnavi rao