ಕರಿಯ ಕನ್ಯಾ ಮದನು

ಕರಿಯ ಕನ್ಯಾ ಮದನು - ತುಳು ಪಾಡ್ದನ ಆಧರಿತ ಕಥೆ ಲೇ: ಡಾ.ಲಕ್ಷ್ಮೀ ಜಿ ಪ್ರಸಾದ

ProfileImg
07 Jun '24
6 min read


image

 ಜನ ಕಬೀರರು ಏಳು ಜನ ಕಚೇರರಿಗೆ ಮುದ್ದಿನ ತಂಗಿ ಮದನು

ಅವಳು ಗರ್ಭಿಣಿ ಆದಾಗ ಅವಳಿಗೆ ಏನು ಆಸೆ ಇದೆ ಎಂದು ಕೇಳುತ್ತಾರೆ 

. ಒಂದೆರಡು ಬಂಗಾರವಲ್ಲ ಸಾವಿರ ಗಟ್ಟಲೆ ಬಂಗಾರ (ಬಿಜೆ ಒಡವೆ ಬೇಕೆ, ಏನು ಬೇಕೆಂದು ಕೇಳಿದರು. |ಏನೆಲ್ಲ ತಂದಿದ್ದೀರಿ ಅಣ್ಣ ನನಗೇನೂ ಆಸೆ ಇಲ್ಲ. ಚೊಚ್ಚಲ ಬಸುರಿ ಆದ ಕರಿಯ ಕನ್ಯಾ ಮದನು ಅವರೇಗೆ ನೋಡುವರು ನಿನ್ನನ್ನು ಹಾಗೆಯೇ ನೋಡು ಎಂದು ಒಂದು ತಲೆ ಕೂದಲಿಗೆ ಒಂದು ಮುತ್ತಿನಂತೆ ಏಳು ಜನ ಪೋಣಿಸಿದಾಗ ತಲೆ ತುಂಬ ಮುತ್ತು ಆಯಿತು

'ಅಣ್ಣಂದಿರನ್ನು ಕರೆದು ಹೇಳುವಳು / ತಲೆಗೂದಲಿಗೆ ಮುತ್ತು ಪೋಣಿಸಬೇಕು. ಎಂದು ಆಸೆ ಇದೆ ಎಂದು ಹೇಳುವಳಪ್ಪ / ಕರಿಯ ಕನ್ಯಾ ಮದನು ಯಾರಪ್ಪ ಅಣ್ಣಂದಿರಿ ನಿನ್ನ ಅತ್ತಿಗೆಯಂದಿರು ಇದ್ದಾರಲ್ಲ ಮಗಳೆ ಕೇಳು ಅವರೇಗೆ ನೋಡುವರು ನಿನ್ನನ್ನು

ಹೇಳಿ ಏಳು ಕಡಲಿನ ಹೊರಗೆ ಹೋಗುವರು ಏಳು ಜನ ಕಬೇರರು | ಮುತ್ತನ್ನು ತಂದರು ಏಳು ಜನ ಕಬೇರರು ಮುತ್ತನ್ನು ಪೋಣಿಸಿದರು ಏಳು ಜನ

ಬಯಕೆ ಸಮ್ಮಾನ ಆಗಿ ಹೊಳೆಯನ್ನು ದಾಟಿ ಹೋಗಬೇಕು ಮಗಳನ್ನು ಕರೆದುಕೊಂಡು ಆ ಕಾಲದಲ್ಲಿ

ಒಂದು ಹೊಳೆಯನ್ನು ದಾಟಿ ಆದಾಗ / ಕದ್ರಿಗೆ ಬಂದು ಮುಟ್ಟುತ್ತದೆ. ಆ ಹೊತ್ತಿಗೆ ಯಾರಮ್ಮ ತಂಗಿ / ನೀರು ಬಾಯಾರಿಕೆಗೆ ಕುಡಿಯಮ್ಮ

 

ಊಟ ಮಾಡಬೇಕು / ಏನು ನಾವು ಮಾಡುವುದೆಂದು

ಅಣ್ಣಂದಿರು ಏಳು ಜನ ಕಬೇರರು / ಆ ಹೊತ್ತಿಗೆ ಅತ್ತಿತ್ತ ನೋಡ

ಒಬ್ಬ ಹೋಗಿ ಅಕ್ಕಿ ತರುತ್ತಾನೆ / ಒಬ್ಬ ಹೋಗಿ ಬೆಂಕಿ ತರುತ್ತಾನೆ

ಒಬ್ಬ ಹೋಗಿ ನೀರು ತರುತ್ತಾನೆ /ಏಳು ಜನ ಸೇರಿ ಏಳು ವಸ್ತು ತ

ಒಂದು ಗೋಳಿ ಮರದ ಬುಡದಲ್ಲಿ / ಒಂದು ಕಲ್ಲಿನ ಒಲೆಯನ್ನು

ಮೂರು ಕಲ್ಲು ಜೋಡಿಸಿ ಇಟ್ಟು / ಒಂದು ಸೇರು ಅಕ್ಕಿ ಬೇಯಲು

ಹೇಳಿದರಪ್ಪ ಕಬೇರರು ಏಳು ಜನ ಕಬೇರರು ಆ ಹೊತ್ತಿಗೆ ನೀರಿಗೆ ಹೋಗಿ ಇನ್ನು ಕದಿರೆಯ ಏಳು ಕೆರೆಯಲ್ಲಿ ಸ್ನಾನಮಾಡಿ

ಆಟವಾಡಿ 

ಬೇಯಿಸಿ ಚಟ್ಟಿಯನ್ನು ಅರೆದು / ನಾವು ಕದಿರೆಯ ನಾವು ಕೆರೆಗೆ ಹ ಸ್ನಾನ ಮಾಡಿ ಬರುವೆವು ತಂಗಿ ಎಂದು ಶುದ್ಧ ಮುದ್ರಿಕೆಯಾಗಿ ನಾವು ಊರಿಗೆ ಹೋಗೋಣ ತಂಗಿಯ ಹೆರಿಗೆ ಸುಸೂತ್ರವಾಗಿ / ಸುಖವಾಗಿರಲೆಂದು ನೆನೆಸಿಕೊಂ ಹಣ್ಣುಕಾಯಿ ಮಾಡಿಸಿ ಬರುವ ಎಂದು ಹೋಗುವರಪ್ಪ ಕಬೇರರು ಏಳು ಜನ ಅಣ್ಣಂದಿರು ಹೋಗುವಾಗ ಕಾಣುತ್ತದೆಯಲ್ಲಿ ತೆಂಗಿನ ತೆಪ್ಪಂಗಾಯ ಅಡಕೆಯ ಜೂಜು ಗುಬ್ಬಿಗಳ ನಾಟಕ ವೇಶ್ಯಯರ ಮೇಳ ಉಂಟಂತೆ ಅದನ್ನು ಹೀಗೆ ನೋಡುವಾಗ ತಮ್ಮಂದಿರೆ ಎಂದು ತೆಂಗಿನ ಕಾಯಿ ತೆಪ್ಪಂಗಾಯಿ ಅದರಲ್ಲಿಯೂ ಮೇಲಾದರು ಅಡಿಕೆಯ ಜೂಜಿಗೆ ಹೋದರು ಅದರಲ್ಲಿಯೂ ಗೆಲುವನ್ನು ಪಡೆದರು ವೇಶ್ಯಯರ ಮೇಳಕ್ಕೆ ಹೋದರು ಒಳಗೆ ಕಾದು ಕಾಣಿಸ ಎಲ್ಲಿಗೆ

ಗಂಡಸರು ಹೋಗುವ ಜಾಗವೆಂದು ಹೋಗುವರಪ್ಪಾ ಅಣ್ಣಂದಿರು ಏಳು ಜನ ಕಬೇರರು / ಅಷ್ಟು ಮಾತು ಕೇಳುವರು ಅಣ್ಣಂದಿ ಅಂ ನಾವು ಗಂಡು ಗಂಡಸರಲ್ವ ಹೋಗುವ

ಅದರಲ್ಲಿಯೂ ಅವರದೇ ಮೇಲುಗೈ ಆಯಿತು ಗುಬ್ಬಿಗಳ ನಾಟಕಕ್ಕೆ ಹೋದರು / ಅದರಲ್ಲಿಯೂ ಗೆಲುವನ್ನು ಪಡೆದರ

ಕೇಳಿದರು. ಬಂಗೇರರು ಕದಿರೆಯ ಬಂಗೇರರು. ಕೆಲಸದವರನ್ನು ಸಿಪಾಯಿಗಳನ್ನು ಕರೆಸಿದರು. ಅವರನ್ನು ಕೈಕಾಲು ಕಟ್ಟಿ ಹಾಕಿರಿ.

ಅವರನ್ನು ಕೊಂಡು ಹೋಗಿ ನೀವು ಸೆರೆಮನೆಯಲ್ಲಿದ ಎಂದು ಹೇಳಿದರು ಕದಿರೆಯ ಬಂಗೇರರು. ಕಾಲನ್ನು ಕಟ್ಟಿ ಸಂಕೋಲೆ ಬಿಗಿದು ತೆಗೆದುಕೊಂಡು ಹೋಗಿ ಅವರನ್ನು ಏಳು ಗುಂಡದ

ಕಾಣಿಸುವುದಿಲ್ಲವೆಂದು ಬಹಳ ಬೇಸರದಲ್ಲಿ ಕೆರೆಯ ಬದಿಗೆ ಮಡಲಿನ ಬದಿಯಲ್ಲಿ ಕದಿರೆಯ ದಾರಿಯಲ್ಲಿ ಬಂತು ನಿಂತಳು

ಒಳಗೆ ಹಾಕುವರು ಏಳುಜನ ಅಣ್ಣಂದಿರನ್ನು ಕಾದು ಕಾದು ಕತ್ತಲೆ ಆಗುವಾಗ ಅಣ್ಣಂದಿರು ಯಾರಮ್ಮ ನೀವು ಕೇಳಿರಿ ಎಂದಾಗ / ಅಣ್ಣಂದಿರು ಏಳು ಜನ ಕಬೇರರು ಎಲ್ಲಿಗೆ ಹೋಗುವರೆಂದು ಹೇಳಿದರೆ ಕೇಳುವಾಗ ತೆಂಗಿನ ತೆಪ್ಪಂಗಾಯ ಅಡಿಕೆಯ ಜೂಜು ಆಟವನ್ನು ಆಡಿದರು ಅದರಲ್ಲಿ ಎಲ್ಲ ಗೆದ್ದರೆಂದು ಅವರನ್ನು ಸಂಕೋಲೆ ಬಿಗಿದು ಕತ್ತಲೆಯ ಮನೆಗೆ ಹಾಕಿದ್ದಾರೆಂದು ಹೇಳುವರು ಹುಡುಗರು ಅಳುವಳು ಬಸುರಿ ಹೆಂಗಸು ನಾನು ಎಲ್ಲಿಗೆ ಹೋಗುವುದೆಂದು ಬಹಳ ದೊಡ್ಡ ಬೇಸರದಲ್ಲಿ ಬರುವಳು ಮಗಳು ಅವಳು ಕರಿಯ ಕನ್ಯಾ ಮದನು

ಅಷ್ಟು ಮಾತನ್ನು ಕೇಳುವಳು ಅಯ್ಯಯ್ಯೋ ದೇವರೆ ಉಳೊ ಉಳೊ ದೇವರೆ

ಡೆನ್ನಾನಾ ಡೆನ್ನಾನ ಬಂಗೇರೆ ನನ್ನ ಒಂದು ಅಣ್ಣನವರನ್ನು ಬಿಡಿರಿ ಬಂಗೇರರೆ ನಿಮಗೆ / ಏನು ಬೇಕು ನಾವು ಕೊಡುವೆವು ಅಣ್ಣನವರೆಂದು

ಕೈ ಕಾಲು ಹಿಡಿಯುವಳು ಅಡ್ಡ ನೀಟ ಬಿದ್ದು ಬಸುರಿ ಹೆಣ್ಣು ಅವಳು ಬೇಡಿಕೊಂಡಳು ಕರಿಯ ಕನ್ಯಾ ಮದನು / ಆ ಹೊತ್ತಿಗೆ ಹೇಳುವರು

ಯಾರಯ್ಯ ಕೆಲಸದವರೆ ಅವಳು ಎಂಥದ್ದು ಹಕ್ಕಿಯ ಹಾಗೆ ಚೊರೆ ಜೊರೆ ಹೇಳುವುದು ಕೊರಳಿಗೆ ಕೈ ಹಾಕಿ ನೂಕಿರಿ ಎಂದು ಹೇಳಿದನು ಅವನು ಕದಿರೆಯ ಬಂಗೇರ ಅಷ್ಟೊಂದು ಮಾತನ್ನು ಕೇಳಿದಳು ಮಗಳು ಅವಳು ಯಾರಯ್ಯ ಬಂಗೇರ ಬಿಡುವುದಾದರೆ ಬಿಡು ಬಿಡದಿದ್ದರೆ ನನ್ನ ಹೊಟ್ಟೆಯಲ್ಲಿರುವ ಮಗುವಾದರೂ ನಿನ್ನ ಏಳುಪ್ಪರಿಗೆ ಮನೆಯನ್ನು / ಬೀಳಿಸದೆ ಬಿಡಲಾರೆ ಎಂದು ನನ್ನ ಅಣ್ಣಂದಿರನ್ನು ಬಿಡಿಸಿಕೊಂಡು ಬರುವ ನನ್ನ ಮಗ ಬಂದು ಎಂದು ಹೇಳಿ ಮಣ್ಣು ಮುಟ್ಟಿ ಆಣೆ ಕೊಡುವಳು ಮಗಳು ಅವಳು ಕರಿಯ ಕನ್ಯಾ ಮದನು ಇಳಿದುಕೊಂಡು ಬಂದು ಆನೆಕಲ್ಲು ಹತ್ತುವಾಗ ಮೇಲೆ ಮೇಲೆ ನೋವು ಬಂದು ಅಯ್ಯಯ್ಯೋ ದೇವರೆ ನನ್ನ ಅಣ್ಣನವರು ಯಾರು ಇಲ್ಲ ಎಲ್ಲಿಗೆ ಹೋಗಲಿ ನಾನು ಎಂದು ಒಂದು ಮಡಿಕೆಯಲ್ಲಿ ಅನ್ನ ಬೇಯಿಸಿ ಗೋಳಿಮರದ ಜಂತಿಗೆ ಕಟ್ಟಿ ಯಾವಾಗ ನನ್ನ ಅಣ್ಣನವರು ಏಳು ಜನ ಸೇರಿ ಎಂಟು ಆಗುತ್ತದೆ ನನ್ನ ಹೊಟ್ಟೆಯಲ್ಲಿರುವ ಮಗು ಸೇರಿ ಒಂಬತ್ತು ಜನ ಸೇರಿ ಊಟ ಮಾಡುವ ಕಾಲದ ತನಕ ಬಿಸಿಯಾಗಿಯೇ ಇರಬೇಕು ಎಂದು ಜಂತಿಗೆ ಕಟ್ಟಿ ನಾರಾಯಣ ದೇವರಿಗೆ ಸೂರ್ಯಚಂದ್ರ ದೇವರಿಗೆ ಆಣೆ ಕಟ್ಟಿ ಇಡುವಳು ಕರಿಯ ಕನ್ಯಾಮದನು ಡೆನ್ನಾ ಡೆನ್ನಾ ಡೆನ್ನಾನಾಗೆ ಉಡು ಉಡೋ ನೋವು ಬಂದಿತು ಮುಂಡಿಯ ಬುಡದಲ್ಲಿ ಕುಳಿತು ಕೊಳ್ಳುವಳೆ ಮಗಳೆ ಮೇಲೆ ಮೇಲೆ ನೋವು ಬಂದು ಗಂಡು ಮಗುವನ್ನು ಹೆರಿಗೆಯ ನೋವಿನಲ್ಲಿ ಹೆರುವಳಪ್ಪಾ ಮಗಳು

 

ಮಗುವನ ನು  ಕೆಸುವಿನ ಎಲೆಯಲ್ಲಿ   ಮಲಗಿಸಿ ನದಿಯಲ್ಲಿ ಬಿಡುತ್ತಾಳೆ ಮದನು

ಅದು ಮೀನು ಹಿಡಿವ ಮರಕಾಲರ ಬಲೆಗೆ ಸಿಕ್ಕುತ್ತದೆ 

 

 ಸರಿದುದೊಡ್ಡ ಅರಸುವಿಗೆ ಏಳು ಉಪ್ಪರಿಗೆ ಮೇಲೆ ಕುಳಿತುಕೊಳ್ಳುವ ಅರಸುವಿಗೆ ಮಕ್ಕಳು ಇಲ್ಲದೆ ಇರುವ ಕಾಲದಲ್ಲಿ ಮೀನು ಹಿಡಿಯುವ ಮೀನು ಹಿಡಿಯುವ ಮರಕ್ಕಾಲರ ಬಲೆಗೆ ಬಿದ್ದ ಮಗುವನ್ನು ತೆಗೆದುಕೊಂಡು ಬಾರಿ ಚಂದದಲ್ಲಿ ಅರಸುವಿನ ಮನೆಯಲ್ಲಿ ಬಿಡುವರು

  ಹಾಗೆ ಕಾಲ ಕಳೆದು ಕೊಂಡು ಇರುವ ಕಾಲದಲ್ಲಿ - ಇಪ್ಪತ್ತು ವರ್ಷ ಪ್ರಾಯ ತುಂಬಿ ಉತ್ತರ ಕರಿಯ ಕನ್ಯಾಮದನುವಿನ ಮಗನಿಗೆ 20 ತುಂಬಿತು

    ಮಗುವಾದರೂ ದೊಡ್ಡವನಾಗಲು ಅವನನ್ನು ಕರೆದುಕೊಂಡು ಕಾಡಿಗೆ ಹೋಗುತ್ತಾರೆ. ಕಾಡಿನಲ್ಲಿ ಬೇಟೆಯಾಡುವಾಗ ಒಂದು ಕಾಡು ಮನುಷ್ಯ ಇದೆ ಎಂದು ಕಾಣಿಸುತ್ತದೆ ಕರಿಯ ಕನ್ಯಾಮದನು ಅತ್ತಿತ್ತ ನೋಡುವಾಗ ಮಗನನ್ನು ನೋಡುವಾಗ ಗಂಡನ ನೆನಪಾಗಿ ಸೂರ್ಯ ಚಂದ್ರ ದೇವರಂತೆ ಬೆಳೆದ ಮಗ ಯಾರೆಂದು ನೆನೆಯುತ್ತಾಳೆ. 

. ಬಿಲ್ಲು ಬಾಣವನ್ನು ಕೆಳಗೆ ಹಾಕು ಮಗ ನಿನ್ನ ತಾಯಿ ಅವಳು ಎಂದು ಮೀನನ್ನು ಹಿಡಿಯುವ ಮರಕಾಲ ಹೇಳುವಾಗ / ಭಾರಿ ದೊಡ್ಡ ಆಶ್ಚರ್ಯ ಓಡಿ ಬಂದು ಅಪ್ಪಿಕೊಂಡು ಬಂದು ಏನು ಆಯಿತು. ತಾಯಿಯವರೆಂದು ಕೇಳುವಳಪ್ಪ ಮಗ ಅಲ್ಲಿ ಗಂಡು ಮಗು ಕೇಳುವಾಗ ನೀನು ಯಾರು ಅರಸು ಮಗ ಇಲ್ಲಿಗೆ ಯಾಕೆ ಬಂದೆ ನಾನು ಯಾರು ತಾಯಿ ಎಂದು ನಿನಗೆ ಹೇಗೆ ಗೊತ್ತಾಯಿತ್ತೆಂದು ಕೇಳುವಳು ಕರಿಯ ಕನ್ಯಾಮದನು ಇಲ್ಲಿ ತಾಯಿಯವರೆ ನೀವು ತೇಲಿ ಬಿಟ್ಟ ನನ್ನನ್ನು ಮಗುವನ್ನು ತಂದವರು ನಿಮ್ಮನ್ನು ನೋಡಿದ ಜನರು ಹೇಳಿದ್ದಾರೆ. ನಿಮಗೆ ಈ ಕಷ್ಟ ಯಾರಿಂದ ಬಂತೆಂದು ಹೇಳಿರಿ ತಾಯಿ ಒಂದು ಗಂಟೆ ಹೋಗುವುದರೊಳಗೆ ಏಳು ಗಂಟೆಯ ಒಳಗೆ ನಾನು ನನ್ನ ಏಳು ಮಾವಂದಿರನ್ನು ಬಿಡಿಸಿಕೊಂಡು ಬರುವೆನೆಂದು ಹೇಳುವನು ಗಂಡು ಹುಡುಗ ಹೇಳಿದಾಗ / ಯಾರಪ್ಪ ಮಗನೆ ಕುಮಾರ ಈಗ ಅಷ್ಟು ದೊಡ್ಡ ಅರಮನೆಯನ್ನು / ನೀನ್ಹೇಗೆ ಗೆಲ್ಲುವೆ ಎಂದು ಕೇಳಿ ನಾನು ನಿಮಗೆ ಹುಟ್ಟಿದ ಮಗ ಆದರೆ ನೀವು ಹೆತ್ತ ಮಗ ಆದರೆ ಸೂರ್ಯಚಂದ್ರ ಆಣೆ ಇಟ್ಟು ನನ್ನನ್ನು ನೀರಿಗೆ ಬಿಡುವಾಗ ನನಗೆ ಸತ್ಯದ ಕಳೆ ಉಂಟಾಯಿತು ತಾಯಿಯವರೆ ಕದಿರೆಯ ಆನೆಯನ್ನು ಹತ್ತುವ ಎಂದು ಹೇಳುವನು ಮಗ ಯಾರಯ್ಯ ಬಂಗೇರ ಆವತ್ತಿನ ಕಾಲದಲ್ಲಿ ನನ್ನ ಅಣ್ಣಂದಿರನ್ನು ಕತ್ತಲೆಯ ಮನೆಯಲ್ಲಿ ಸಂಕೋಲೆಯಲ್ಲಿ ಸುತ್ತಿ ಕುಳ್ಳಿರಿಸಿದೆಯಲ್ಲ ಈವತ್ತಾದರೂ ಬಿಡು ಎಂದು ಹೇಳುವಾಗ 

ಹಾಕಬೇಕೆ ಕೇಳುತ್ತಾನೆ. ಅವನು ಕದಿರೆಯ ಬಂಗೇರ ಆ ಹೊತ್ತು ಆಗುವಾಗ ಉಪ್ಪರಿಗೆಯನ್ನು ಹೊತ್ತಿಸಿ

- ಮಾಳಿಗೆಯ ಮನೆಗೆ ಬರುವಾಗ / ಏಳು ಮಾಳಿಗೆ ಉರಿದು ಭಸ್ಮವಾಯಿತು. ಏಳು ಜನ ಮಾವಂದಿರನ್ನು ಬಿಡಿಸಿಕೊಂಡು ಬರುವನೆ ಮಗ ಒಬ್ಬ ಮಗ ಕುಮಾರ ಕರಿಯ ಕನ್ಯಾ, ಮದನುವಿನ ಯಾರಮಾ, ಮದನು ಇದು ಯಾರು ಹುಡುಗನೆಂದು "ಕೇಳುವಾಗ ನಿಮ್ಮ ಅಳಿಯ ಅಣ್ಣಂದಿರೆ ಇಷ್ಟು ವರ್ಷ ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ರಾಜನ ಮಗ ಆಗಿದ್ದ. .ಇವತ್ತು ಆಗುವಾಗ ನನ್ನ ಮಗ ಕುಮಾರ ಎಂದು ಗೊತ್ತಾಯಿತು. ಇನ್ನು ನಾವು ಹೋಗಿ ಅಂದು ಮಾಡಿದ ಊಟ ಮಾಡುವ ಅದನ್ನು ಊಟ ಮಾಡಿ ಕಬೇರಂದ ಊರಿಗೆ ಹೋಗುವ' ಎಂದು ಹೇಳುವರಪ್ಪ ಕಬೇರರು ಏಳು ಜನ ಕಬೇರರು ಕರಿಯ ಕನ್ಯಾ, ಮದನು ಎಂದು

ಟಿಪ್ಪಣಿ :

1. ಕಬೇರರು : ಕಬೀರರು, ಮೀನು ಹಿಡಿಯುವವರಲ್ಲಿ ಒಂದು ವರ್ಗ.

2. ಮುಂಡಿ : ಗೆಡ್ಡೆ-ಗೆಣಸು ಜಾತಿಗೆ ಸೇರಿದ, ಅಗಲವಾದ ಎಲೆಯುಳ್ಳ

ಒಂದು ಸಸ್ಯ.

3. ತೆಕ್ಕಿಯ ಎಲೆ : ಸಾಗುವಾನಿ ಮರದ ಎಲೆ.

4. ಮುಂಡೇವು : ಒಂದು ಜಾತಿಯ ಮೊದರು ಹುಲ್ಲು. ಚಾಪೆ ಹೆಣೆಯಲು ಉಪಯೋಗಿಸುತ್ತಾರೆ. 5. ಮರಕ್ಕಾಲರು : ಬೆಸ್ತರು, ಮೀನು ಹಿಡಿಯುವ ಒಂದು ಜನಾಂಗ

ಕಥಾ ಸಾರಾಂಶ

 

ಏಳು ಮಂದಿ ಕಬೀರರ ಮುದ್ದಿನ ತಂಗಿ ಮದನು, ಅವಳನ್ನು ಮದುವೆ ಮಾಡಿ ಕೊಟ್ಟಿದ್ದಾರೆ. ಅವಳು ಚೊಚ್ಚಲ ಬಸುರಿಯಾದಾಗ ಅವಳ ಸೀಮಂತಕ್ಕೆ ಸಮುದ್ರಕ್ಕೆ ಹೋಗಿ ಮುತ್ತುಗಳನ್ನು ತರುತ್ತಾರೆ ಅವಳ ಏಳು ಏನ ಅಣ್ಣಂದಿರು. ಸೀಮಂತ ಮುಗಿಸಿ ತಮ್ಮ ಮನೆಗೆ ಕರೆ ತರಲು ಅಣ್ಣಂದಿರು ಹೋಗುತ್ತಾರೆ, ಏಳು ಜನ ಅಣ್ಣಂದಿರು ಅವಳನ್ನು ಕರೆತರುತ್ತಾರೆ. ಕದ್ರಿಯ ಸಮೀಪಕ್ಕೆ ಬಂದಾಗ ಮಧ್ಯಾಹ್ನವಾಗುತ್ತದೆ. ಕಲ್ಲು ಜೋಡಿಸಿ,

- ಒಲೆ ಹೂಡಿ, ಸೌದೆ ಉರಿಸಿ, ಅಕ್ಕಿ ಬೇಯಿಸಿ, ಅಡುಗೆ ಮಾಡಿಟ್ಟು, ಸ್ನಾನ ಮಾಡಿ ಬರಲು ಏಳು ಜನ ಕಬೀರರು ಹೋಗುತ್ತಾರೆ. ಸ್ನಾನ ಮಾಡಿ ಬರುವಾಗ ಮುಂದೆ ತಂಗಿಗೆ ಸುಖಪ್ರಸವವಾಗಲಿ ಎಂದು ಬೇಡಿಕೊಳ್ಳಲು ಕದ್ರಿ ದೇವಾಲಯಕ್ಕೆ ಹೋಗುತ್ತಾರೆ. ಅಲ್ಲಿ ತೆಪ್ಪಂಗಾಯಿ, ಗುಬ್ಬಿ ಕಾಳಗ ಸೂಳೆಯರ ಮೇಳ ಮೊದಲಾದ ಸಾಹಸದ ಆಟಗಳು ಇರುತ್ತವೆ. ಇವರು ಎಲ್ಲದರಲ್ಲಿ ಗೆಲ್ಲುತ್ತಾರೆ. ಆಗ ಕದ್ರಿಯ ಅರಸ ಅಸೂಯೆಯಿಂದ ಅವರನ್ನು ಬಂಧಿಸಿ ಸೆರೆಮನೆಯಲ್ಲಿ ಕೂಡಿ ಹಾಕುತ್ತಾನೆ. ತುಂಬು ಗರ್ಭಿಣಿ ಮದನು ಬಂದು ಅಣ್ಣಂದಿರನ್ನು ಬಿಡುವಂತೆ ಕೇಳಿಕೊಂಡರೂ ಬಿಡುವುದಿಲ್ಲ. ಆಗ ಅವಳು “ನೀನು ನನ್ನ ಅಣ್ಣಂದಿರನ್ನು ಬಿಡದಿದ್ದರೆ ನನ್ನ ಹೊಟ್ಟೆಯಲ್ಲಿರುವ ಮಗ ಮುಂದೆ ನಿನ್ನನ್ನು ಸೋಲಿಸಿ ಮಾವಂದಿರನ್ನು ಬಿಡಿಸುತ್ತಾನೆ' ಎಂದು ಹೇಳಿ ಅಲ್ಲಿಂದ ಬಂದು ಕಾಡಿನಲ್ಲಿ ವಾಸಿಸುತ್ತಾಳೆ. ಒಂದು ಗಂಡು ಮಗುವಿಗೆ ಜನ್ಮವೀಯುತ್ತಾಳೆ. ಆ ಮಗುವನ್ನು ತೆಕ್ಕಿ ಎಲೆಯಲ್ಲಿ ಮಲಗಿಸಿ ಸಮುದ್ರದಲ್ಲಿ ತೇಲಿಬಿಡುತ್ತಾಳೆ. ಆ ಮಗು ಮರಕಾಲರ ಕೈಗೆ ಸಿಕ್ಕುತ್ತದೆ. ಅವರು ಆ ಮಗುವನ್ನು ಸಂತಾನವಿಲ್ಲದ ನಂದಾರ ಅರಸನಿಗೆ ಕೊಡುತ್ತಾರೆ. ಆ ಮಗು - ಇಲ್ಲಿ ರಾಜನ ದತ್ತು ಮಗುವಾಗಿ ಬೆಳೆಯುತ್ತಾನೆ. ಮುಂದೊಂದು ದಿನ ಬೆಳೆದು ದೊಡ್ಡವನಾದ ನಂತರ ಕಾಡಿಗೆ ಬಂದಾಗ ಮರಕಾಲರ ಸಹಾಯದಿಂದ ತನ್ನ ತಾಯಿಯ ಗುರುತು ಹಿಡಿಯುತ್ತಾನೆ. ಕದ್ರಿಯ ಅರಸನನ್ನು ಸೋಲಿಸಿ ತನ್ನ ಮಾವಂದಿರನ್ನು ಬಿಡಿಸಿಕೊಂಡು ಬರುತ್ತಾನೆ. ಅಪ್ರತಿಮ ವೀರರನ್ನು, ಸಾಹಸಿಗಳನ್ನು ಕಂಡರೆ ಅವರ ಮೇಲೆ ಮತ್ಸರ ಪಟ್ಟು ರಾಜರುಗಳು  ಕರುಬುವ   ವಿಚಾರ ಅನೇಕ ಪಾಡ್ಡನಗಳಲ್ಲಿ ಉಕ್ತವಾಗಿದೆ.  ಹೀಗೆಯೇ ಈ ವೀರರನ್ನು.  ಬಿ ಟ್ಟರೆ ಮುಂದೊಂದು ದಿನ ತಮ್ಮ ಅಧಿಕಾರ ಕ್ಕೆ ಧಕ ಕೆ  ಬಂದೀತೆಂಬ ಭಯದಿಂದ ಅವರನ್ನು ನಾಶಕ್ಕೆ ಯತ್ನಿಸುವ  ವಿಚಾರ ಇದು

 ಜುಮಾದಿ, ಹಳ್ಳತ್ತಾಯ, ಕಲ್ಕುಡ ಕಲ್ಲುರ್ಟಿ, ಮೊದಲಾದ ಪಾಡ್ದನ ಗಳಲ್ಲೂ  ಇಂಥಹದ್ದೇ ಒಂದು ಎಲ್ಲೋ ನಡೆದಿರಬಹುದಾದ ಘಟನೆಯ ಸುತ್ತಲಿನ  ಕಥೆಗಳು ಇವೆ

 ಕೆಲವು ಅಲೌಕಿಕ ವಿಚಾರಸೇರಿಕೊಂಡಿವೆ

ಚಿತ್ರ‌‌ ಅಂತರ್ಜಾಲ..

 

Category:Stories



ProfileImg

Written by Aravinda S