ಮುಸ್ಸಂಜೆ ವೇಳೆಲಿ ಸೂರ್ಯ ತನ್ನ ಕೆಲಸ ಮುಗಿಸಿ ಶಶಿಗೆ ಕೆಲಸ ಮಾಡಲು ಅವಕಾಶ ಕೊಟ್ಟು ಹೊರಡುವ ಸಮಯ ತಂಪಾದ ಗಾಳಿಗೆ ಸಮುದ್ರದ ಅಲೆಗಳ ಆರ್ಭಟದ ಎದುರು ಮರೆಯಾಗುತ್ತಿರುವ ಸೂರ್ಯನನ್ನೇ ದಿಟ್ಟಿಸುತ್ತಾ ತನ್ನ ಹಣೆಬರಹಕ್ಕೆ ಹೊಣೆ ಯಾರು ಎಂದು ಕಣ್ಣೀರಿಡುತ್ತಾ ಕುಳಿತಿರುವಳು "ಪ್ರೇರಣಾ"
ಗೆಳತಿಯನ್ನು ಅರಸಿ ಬಂದ ಲಕ್ಷ್ಮಿ ಹೇ ಪ್ರೇರಣ ಇಲ್ಲೇನೇ ಮಾಡ್ತಾ ಇದ್ದೀಯಾ ಎಲ್ಲರೂ ನಿನ್ನನ್ನು ಹುಡುಕುತ್ತಿದ್ದಾರೆ ನಾಲ್ಕು ದಿನದಲ್ಲಿ ಮದುವೆ ಇಟ್ಕೊಂಡು ಒಂಟಿಯಾಗಿ ಒಬ್ಬಳೇ ಬಂದಿರುವೆಯಲ್ಲ ಯಾಕೆ ಏನಾಯ್ತು ನನ್ನನ್ನು ಕರೆದ ಬಂದಿರಿ ಬಂದಿದೆಯಲ್ಲ..... ಏನಿಲ್ಲ ಲಚ್ಚಿ ( ಲಕ್ಷ್ಮಿ ) ಮನಸು ಭಾರವಾಗಿದೆ ನಾ ಕಂಡ ಕನಸು ಇನ್ನು ನಾಲ್ಕು ದಿನಗಳಲ್ಲಿ ಎಲ್ಲ ಮುಗಿದು ಹೋಗುತ್ತೆ ಕಣೆ..…
ಏನಾಯ್ತು ಅಂತದ್ದು ಏನ್ ಕನಸು ನನ್ ಹತ್ರನು ಹೇಳಿಲ್ವಲ್ಲ ಅಷ್ಟೊಂದು ದೂರದವಳಾದೆನಾ ನಾನು?...…
ಅದನ್ನ ಹೇಳುವಂತಹ ಸಂದರ್ಭ ಇದುವರೆಗೂ ಬಂದಿರ್ಲಿಲ್ಲ ಅಂತ ಹೇಳಿಲ್ಲ ಕಣೆ .... ಸರಿ ಈಗ್ಲಾದ್ರೂ ಹೇಳ್ತೀಯೋ ಅಥವಾ ಹೇಳುವುದಕ್ಕೆ ಸಂದರ್ಭ ಇನ್ನು ಕೂಡಿ ಬಂದಿಲ್ವಾ? ಅದು...... ಲಚ್ಚಿ ಅದು..... ನಾನು ನೀನು ಕಾಲೇಜ್ ಡೇ ಫಂಕ್ಷನ್ ಗೆ ಹೋಗಬೇಕಾದರೆ ಮಾಲ್ ಹತ್ರ ನಾನೊಬ್ಬರ್ನ ನೋಡಿ ಇಷ್ಟಪಟ್ಟಿದ್ದೆ ಕಣೆ ನೋಡೋಕೆ ತುಂಬಾ ಅಂದ್ರೆ ತುಂಬಾನೇ ಚೆನ್ನಾಗಿದ್ದಾರೆ ಆದ್ರೆ ಇದುವರೆಗೂ ಒಂದು ಸಲನು ಭೇಟಿ ಆಗಿಲ್ಲ ಗೊತ್ತಾ, ಐದು ವರ್ಷದಿಂದ ನಾ ಕಾಯ್ತಾ ಇದೀನಿ ಅವರುಗೋಸ್ಕರ ಬರಿ ಅವರನ್ನು ಫಾಲೋ ಮಾಡೋದಾಯ್ತ್ ಅಷ್ಟೇ ಅವರು ಒಂದು ಸಲಾನು ನನ್ ತಿರುಗಿ ನೋಡಿಲ್ಲ ಗೊತ್ತಾ....
ಹೇ ಏನೇ ಹೇಳ್ತಿದಿಯ ಐದು ವರ್ಷದಿಂದ ಲವ್ ಮಾಡ್ತಿದೀಯ ಯಾರೇ ಅವನು ಯಾವ್ ಊರು ನನಗೆ ಒಂದ್ಸಲಾನು ಹೇಳೇ ಇಲ್ಲಾ... ಹೊ ಹಂಗಾದ್ರೆ ಅಲ್ಲೋಗೋಣ ಇಲ್ಲೊಗೋಣ ಅಂತಾ ಕರ್ಕೊಂಡ್ ಹೋಗ್ತಿದ್ದೀದು ಅವರನ್ನ ಫಾಲೋ ಮಾಡ್ಕೊಂಡ್ ಹೋಗ್ತಿದ್ದಿದ್ದ ನನಗಿದು ಗೊತ್ತೇ ಇರಲಿಲ್ಲವಲ್ಲ ಸುಮ್ಮನೆ ನಿಂಜೊತೆಗೆ ಬರ್ತಾ ಇದ್ನಲ್ಲ ಅಯ್ಯೋ ದೇವರೇ 😞....... ಹೇ ಬೇಜಾರಾಗಬೇಡ ಅವರು ನನ್ನ ನೋಡುತ್ತಿಲ್ಲ ಅನ್ನೋ ಟೆನ್ಶನ್ ಅಲ್ಲಿ ಎಷ್ಟು ಸಲ ಹೇಳಬೇಕು ಅಂದುಕೊಂಡಿದ್ರುನು ಮರೆತುಬಿಟ್ಟಿದ್ದೆ ಸಾರಿ...... ಸರಿ ಇವಾಗ ಹೇಳು ಯಾರು ಯಾವ ಊರು ಏನ್ ಮಾಡಿಕೊಂಡಿದ್ದಾರೆ ಅವರ ಹೆಸರೇನು........ ಇದ್ಯಾವುದು ನನಗೆ ಗೊತ್ತಿಲ್ಲ ಕಣೆ, ಅವನು ಅವಾಗವಾಗ ಕಾಣಿಸಿಕೊಳ್ಳುತ್ತಿದ್ದ ಅಷ್ಟೇ ಆದರೆ ನನ್ನ ಪ್ರೀತಿ ಮಾಡೋದಿರಲ್ಲಿ ನನ್ನಾ ನೋಡಿದನು ಇಲ್ವಾ ಅನ್ನೋದೇ ಗೊತ್ತಿಲ್ಲ....... " ಅಯ್ಯೋ, ನಿಂದೆಂತ ಪ್ರೀತಿನೋ ಏನೋ ನಡಿಹಾಗಿದ್ರೆ ನಾಲ್ಕು ದಿನದಲ್ಲಿ ಮದುವೆ ಇಟ್ಕೊಂಡು ಗೊತ್ತು ಗುರಿ ಇಲ್ಲದವನ ನೆನಪ ಮಾಡ್ಕೊಂಡು ಕೂತಿದಿಯಲ್ಲ ಏನು ಹೇಳಬೇಕು ನಿನಗೆ ನಡಿ ಮನೆಗೆ ಎಲ್ಲರೂ ಕಾಯ್ತಾ ಇದಾರೆ ಸುಮ್ನೆ ಅಪ್ಪ ಅಮ್ಮ ನೋಡಿದ್ದ ಹುಡುಗನ ಮದುವೆಯಾಗಿ ಹಾಯಾಗಿರು..... ಅವನೇನಾದ್ರೂ ನಿನಗೆ ಸಿಗಬೇಕು ಅನ್ನೋದು ನಿನಗೆ ಬರೆದಿದ್ದರೆ ಸಿಕ್ಕೆ ಸಿಗ್ತಾನೆ. ಈ ನಾಲ್ಕು ದಿನದಲ್ಲಿ ಏನಾದ್ರೂ ಒಂದು ಆಗೇ ಆಗುತ್ತೆ ಚಿಂತೆ ಮಾಡಬೇಡ......... ಹೂ ಆ ನಂಬಿಕೆಲಿ ಇದೀನಿ....ಗುಡ್ ಗರ್ಲ್ ಬಾ ಮನೆಗೆ ಹೋಗೋಣ...…
ಹೇ ನಿಮಗೆ ಪ್ರೇರಣ ಯಾರು ಅಂತಾ ಹೇಳೇ ಇಲ್ಲಾ ಅಲ್ವಾ ಬನ್ನಿ ನಮ್ಮ ಹುಡುಗಿ ಪರಿಚಯ ಮಾಡ್ಸ್ತೀನಿ.…
ರಾಮ್ ಗೋಪಾಲ ಮತ್ತು ಸಾವಿತ್ರಿ ದಂಪತಿಯ ಏಕೈಕ ಪುತ್ರಿ ಪ್ರೇರಣಾ .... ತನ್ನ ವಿದ್ಯಾಭ್ಯಾಸ ಮುಗಿಸಿ ತಮ್ಮದೇ ಕಂಪನಿಯಲ್ಲಿ ಸಿಇಓ ಆಗಿ ಕೆಲಸ ಮಾಡ್ತಾ ಇದ್ದಾಳೆ.…
ತುಂಬಾ ತುಂಟಿ ಹುಡುಗಿ ಅವಳು ಬೇಕು ಬೇಡಗಳನ್ನು ಅವರಪ್ಪ ಅಮ್ಮ ಅವ್ಳು ಬೇಕು ಅನ್ನೋ ಮುಂಚೆನೇ ತಂದಿಡ್ತಾರೇ ಮಗಳೆಂದರೆ ಪಂಚಪ್ರಾಣ....... ಮಗಳಿಗೆ ಸಣ್ಣ ನೋವಾದರೂ ತಮಗೆ ಆಯಿತು ಅನ್ನೋ ಹಾಗೆ ದುಃಖ ಪಡುವಂತಹ ಜೀವಿಗಳು..... ಇಂತಹ ಜೀವಿಗಳು ಮಗಳನ್ನು ಕೇಳದೆನೇ ನಾಲ್ಕ್ ದಿನದಲ್ಲಿ ಮದುವೆ ಫಿಕ್ಸ್ ಮಾಡಿದಾರೆ ಅಂತಂದ್ರೆ ಅದಕ್ಕೆ ಒಂದು ಕಾರಣ ಇರುತ್ತೆ ಅಲ್ವಾ..... ಆ ಕಾರಣ ಏನು ಅಂತ ರಾಮಗೋಪಾಲ್ ಅವರು ತಿಳಿಸುತ್ತಾರೆ ಬನ್ನಿ....…
ಒಂದು ದಿನ ಮುಂಜಾನೆ ಸಾವಿತ್ರಿ ಅವರು ದೇವರ ಪೂಜೆ ಮಾಡಿ ಮನೆ ಕೆಲಸ ಎಲ್ಲಾ ಮಾಡಿ ತಿಂಡಿ ಮಾಡ್ತಾ ಕೂತಿರುವಾಗ ಚನ್ನಕೇಶವ ಮತ್ತು ಗೌರಿ ದಂಪತಿಗಳು ಮನೆಗೆ ಬರ್ತಾರೆ ಇವ್ರು ರಾಮ್ ಗೋಪಾಲ್ ಅವರಿಗೆ ಆತ್ಮೀಯ ಸ್ನೇಹಿತರು ಇಬ್ಬರು ಬಿಸಿನೆಸ್ ಪಾರ್ಟ್ನರ್ಸ್........ ಅಚಾನಕ್ಕಾಗಿ ಬಂದ ದಂಪತಿಗಳನ್ನು ನೋಡಿ ಸಾವಿತ್ರಿ ಯವರು ಗೌರವದಿಂದ ಒಳಗೆ ಕರೆಯುತ್ತಾರೆ..…
ಕುಶಲೋಪರಿ ವಿಚಾರಿಸಿಕೊಂಡು ಇಷ್ಟು ದೂರ ಬಂದಿರುವುದಕ್ಕೆ ಕಾರಣ ಕೇಳುತ್ತಾರೆ.... ರಾಮ್ ಗೋಪಾಲ್ ಇಲ್ವಾ.... ಇದಾರೆ ಕರಿತೀನಿ...... ರೀ... ರೀ.... ಯಾರ್ ಬಂದಿದಾರೆ ನೋಡಿ...... ಯಾರ್ ಬಂದಿದಾರೆ... ಬಂದೆ ಐದು ನಿಮಿಷ....…
ಹೊ ಚೇತನ್ ಹೌ ಆರ್ ಯು ಮ್ಯಾನ್ ಏನ್ ನಮ್ಮ ಮನೆಕಡೆ ಸವಾರಿ ಎಷ್ಟು ಸಲಾ ಕರೆದರೂ ಬರದೇ ಇದ್ದೋನು ಇವತ್ತು ದಂಪತಿಗಳು ಬಂದಿದಿರಾ ಏನ್ ಸಮಾಚಾರ...... ನಾನು ಚೆನಾಗಿದೀನಿ ನೀನು ಹೇಗಿದ್ದೀಯ..... ನಾನು ಚೆನಾಗಿದೀನಿ.... ಬಂದ ಕಾರಣ....ಅದು ನನ್ನ ಮಗ "ಪ್ರೀತಮ್" ವಿದ್ಯಾಭ್ಯಾಸ ಮುಗಸಿ ಕಂಪನಿ ನೋಡ್ಕೊಳ್ತಾ ಇದಾನೆ ಅವನಿಗೆ ನಿನ್ನ ಮಗಳನ್ನ ಕೇಳೋಣ ಅಂತಾ ಬಂದಿದೀವಿ...... ಹೊ ಹೌದ ನನ್ನ ಮಗಳು ಮನೇಲಿ ಇಲ್ಲಾ ಅವಳನ್ನು ಒಂದು ಮಾತು ಕೇಳಬೇಕು.... ನಿಮಗೆ ಒಪ್ಪಿಗೆ ಇದಿಯಾ ನಮ್ಮ್ ಮನೆಗೆ ನಿಮ್ಮ ಮಗಳನ್ನು ಕೊಡುವುದಕ್ಕೆ.... ಎಂಥ ಮಾತು ಹೇಳ್ತಾಇದಿಯ ಸ್ನೇಹಿತರಾದ ನಾವು ಬೀಗರಾಗ್ತಿವಿ ಅಂದ್ರೆ ಯಾಕ್ ಒಪ್ಪಲ್ಲ...... ಮಕ್ಕಳ ಭವಿಷ್ಯದ ವಿಚಾರ ಅಲ್ವಾ ಅದ್ಕಕೆ ಅವಳನ್ನ ಒಂದು ಮಾತು ಕೇಳೋಣ ಅಂತಾ ಹೇಳಿದ್ದು..... ಪ್ರೀತಮ್ ಹಾಗೂ ನಿನ್ನ ಮಗಳು ಇಬ್ಬರು ಪ್ರೀತಿ ಮಾಡ್ತಾ ಇದಾರೆ ಆದ್ರೆ ಪ್ರೇರಣಾ ಗೆ ಮಾತ್ರ ಇವ್ನು ಪ್ರೀತಿ ಮಾಡೋದು ತಿಳದಿಲ್ಲ ಅವ್ಳು ಇವನನ್ನು ಹೋದಲ್ಲಿ ಬಂದಲ್ಲಿ ಫಾಲೋ ಮಾಡ್ಕೊಂಡು ಬರೋದನ್ನ ನಾನು ನೋಡಿದೀನಿ ಇದು ತಿಳಿದಮೇಲೇನೆ ಮಗನ ಹತ್ರ ಮಾತಾಡಿ ಇಲ್ಲಿಗೆ ಬಂದಿದ್ದು....... ಹೊ ಹೌದ ನಮಗೆ ಇದರಬಗ್ಗೆ ಗೊತ್ತೇ ಇಲ್ಲಾ.... ಇರಲಿ ಬಿಡಿ ಆಗೋದೆಲ್ಲಾ ಒಳ್ಳೇದಕ್ಕೆ..... ಅದ್ಕಕೆ ನೀವು ನಂಗೊಂದು ಸಹಾಯ ಮಾಡಬೇಕು ನಿಮ್ಮ ಮಗಳಿಗೆ ಹುಡುಗನ ಬಗ್ಗೆ ಯಾವುದೇ ಮಾಹಿತಿ ಕೊಡ್ಬೇಡಿ ಮದುವೆ ದಿನವೇ ಅವನನ್ನ ನೋಡಿ ಖುಷಿ ಪಡೋದನ್ನ ನಮ್ಮ ಮಗ ನೋಡ್ಬೇಕಂತೆ ಹಾಗಾಗಿ ಇದೊಂದು ನಮ್ಮಕಡೆ ಇಂದ ವಿನಂತಿ..... ಇದರಿಂದ ನಮ್ಮ್ ಮಗಳು ಕೆಟ್ಟ ನಿರ್ಧಾರ ತೆಗೆದುಕೊಂಡರೆ ಏನುಮಾಡುವದು ಅಂತಾ ಸಾವಿತ್ರಿ ಅವರು ಕೇಳಿದರು (ಎಷ್ಟೇ ಆದ್ರೂ ಹೆತ್ತ ಕರುಳು ಅಲ್ಲವೇ)...…
ಅದಕ್ಕೆ ರಾಮ್ ಗೋಪಾಲ ಅವರು ಸಾವಿತ್ರಿ ನಮ್ಮ್ ಮಗಳು ಅಷ್ಟೊಂದು ವೀಕ್ ಇಲ್ಲಾ ಎಲ್ಲವನ್ನು ನಿಧಾನವಾಗಿ ಯೋಚೆನೆ ಮಾಡಿ ನಿರ್ಧಾರ ತೆಗೆದುಕೊಳ್ತಾಳೆ ಅನ್ನೋ ನಂಬಿಕೆ ಇದೆ ನೀನು ಹೆದರಬೇಡ..... ಹಾಗಿದ್ರೆ ಮದುವೆ ಯಾವಾಗ್ ಮಾಡೋದು ಚೇತನ್...... ಇನ್ನು ನಾಲ್ಕು ದಿನಕ್ಕೆ ಒಳ್ಳೆ ಮುಹೂರ್ತ ಇದೆ ಇದಾದ್ಮೇಲೆ ಎರೆಡು ವರ್ಷದ ವರೆಗೂ ಇಲ್ವಂತೆ ಹಾಗೆ ಪ್ರೀತಮ್ ಕೂಡ ಅಬ್ರಾಡ್ ಗೆ ಹೋಗ್ತಿದಾನೆ ಇನ್ನು ಹತ್ತು ದಿನದಲ್ಲಿ ಅಷ್ಟರಲ್ಲಿ ಮದುವೆ ಮಾಡಿದ್ರೆ ಅವ್ರು ಹಾಯಾಗಿ ಹನಿಮೂನ್ ಮುಗಸ್ಕೊಂಡು ಬರ್ತಾರೆ ಏನ್ ಅಂತೀರಾ.... ಎಲ್ಲ ತೀರ್ಮಾನ ಮಾಡಿದಿರಾ ಅಂದಮೇಲೆ ಹೇಳೋದೇನಿದೆ ನಮಗೂ ಒಪ್ಪಿಗೆ ಇದೆ ಇನ್ನು ನಾಲ್ಕು ದಿನಕ್ಕೆ ಮದುವೇ ಮಾಡೋಣ ಎಲ್ಲರು ಖುಷಿ ಇಂದ ಸ್ವೀಟ್ ತಿಂದು ಸಂಭ್ರಮ ಪಡ್ತಾರೆ.....…
ಆದರೆ ಪಾಪ ಇದೆಲ್ಲ ಗೊತ್ತಿಲ್ಲದೇ ಪ್ರೇರಣ ಚಿಂತೆಯಲ್ಲಿ ಕೊರಗುತ್ತಿರುತ್ತಾಳೆ...…
ಕಳ್ಳ ಪ್ರೀತಮ್ ತನಗೇನು ಗೊತ್ತಿಲ್ಲ ಅನ್ನೋಹಾಗೆ ಅವನ ಹುದಯದ ಒಡತಿನ ಕಡಿಸುತಿರುತ್ತಾನೆ....…
ಇದೆಲ್ಲದರ ನಡುವೆ ಮದುವೆ ದಿನ ಬಂದೆ ಬಿಟ್ಟಿತು ಚೆಂದದ ಗೊಂಬೆಗೆ ಅಲಂಕಾರ ಮಾಡಿ ಕುಡಿಸಿರುತ್ತಾರೆ ಅಲ್ಲಿಗೆ ಬಂದ ಲಚ್ಚಿ ಎಷ್ಟು ಮುದ್ದಾಗಿ ಕಾಣ್ತಿದಿಯೇ ನಿನ್ ಮದುವೆ ಆಗ್ತಿರೋ ಹುಡುಗ ನಿನ್ನ ನೋಡಿ ನಿಂತಲ್ಲೇ ಬಿದ್ದೋಗ್ತಾನೆ ಆದ್ರೆ ಏನೋ ಮಿಸ್ ಆಗಿದಿಯಲ್ಲ.... ಏನು ಅಂತಾ ಬೇಸರದಲ್ಲೇ ಕೇಳ್ತಾಳೆ ಪ್ರೇರಣ... ಅಷ್ಟ್ ಯಾಕೆ ಬೇಜಾರ್ ಅಲ್ಲಿ ಇದಿಯಾ ನಿನಗೆ ಎಷ್ಟೇ ಅಲಂಕಾರ ಮಾಡಿದರು ನಿನ್ನ ನಗುವಿಲ್ದೆ ನಿನ್ನ ಅಲಂಕಾರ ಸಂಪೂರ್ಣ ಆಗೋದಿಲ್ಲ ಕಣೆ.... ಸ್ವಲ್ಪನಾದರೂ ನಗು ಮಾ...... , ನೀನ್ ಮದುವೆ ಆಗ್ತಿರೋ ಹುಡುಗ ನೀನ್ನಾ ಚೆನ್ನಾಗಿ ನೋಡ್ಕೊಂಡೆ ನೋಡ್ಕೊಂತಾನೆ ಯಾಕೆ ಚಿಂತೆ ಮಾಡ್ತೀಯಾ.... ಅಂಕಲ್ ಆಂಟಿ ನಿನ್ನ ಖುಷಿಗೋಸ್ಕರನೇ ಇಷ್ಟೆಲ್ಲಾ ಮಾಡಿರೋದು ಅವರಮೇಲೆ ನಂಬಿಕೆ ಇದ್ರೆ ಇವಾಗ ನಿನ್ನ ಮುಖದಲ್ಲಿ ನಗು ಬರಬೇಕು....ಬಾ ಮಂಟಪಕ್ಕೆ ಹೋಗೋಣ ಎಲ್ಲ ಸರಿಯಾಗುತ್ತೆ ನಂಬಿಕೆ ಇಡು...... ಹೂ ಅಂತಾ ಮೇಲಿನ ಮಾತಿಗೆ ಹೇಳಿದರು ಹೆಜ್ಜೆಗಳು ಮುಂದಕೆ ಇಡೋಕೆ ಭಯ ಪಡ್ತಾಯಿದ್ವು...…
ಅಂತರ್ಪಟದ ಹಿಂದುಗಡೆ ಪ್ರೀತಮ್ ನಿಂತಿದ್ದರೆ ಇನ್ನೊಂದು ಕಡೆ ಪ್ರೇರಣ ಅಂತರ್ಪಟ ಸರಿದ ತಕ್ಷಣ ಪ್ರೀತಮ್ ನಗುಮುಖದಿಂದ ಪ್ರೇರಣನ ನೋಡ್ತಾ ಇದ್ದಾನೆ ಆದ್ರೆ ಇವಳಿಗೆ ಭಯ ಇಷ್ಟ ಪಟ್ಟೋನ ಬಿಟ್ಟು ಬೆರೆವರನ್ನ ಮದುವೆ ಆಗ್ತಿದೀನಿ ಅನ್ನೋ ಹತಾಶೆ ಇಂದ ತಲೆ ತಗ್ಗಿಸಿ ಕಂಬನಿಸುರಿಸುತ್ತಿರುತ್ತಾಳೆ.... ಆಗ ಲಚ್ಚಿ ಬಂದು ಪ್ರೇರಣ ನೀನು ಮದುವೆ ಆಗ್ತಿರೋ ಹುಡುಗನ ಒಂದ್ಸಲ ನೋಡೆ ಯಾರು ಅಂತ ಎಷ್ಟು ಚೆನಾಗಿದಾನೆ ಗೊತ್ತಾ ನೋಡಿದ್ರೆ ಬೇಡಾ ಅಂತೀರೋಳು ಒಪ್ಪಗೋತೀಯ ಹಾಗ ಒಂದ್ ವೇಳೆ ನಿನಗೆ ಹಿಡಿಸಿಲ್ಲ ಅಂದ್ರೆ ಹೇಳು ನಾನೆ ಮದುವೆ ಆಗ್ತೀನಿ ಓಕೆ ನಾ ಅಂತಾ ಕಡಿಸ್ತಾಳೆ .... ಇವಳು ತಲೆ ಅಲ್ಲಾಡಿಸಿ ಮೆಲ್ಲಗೆ ಕತ್ತನ್ನ ಮೇಲೆತ್ತಿ ನೋಡ್ತಾಳೆ ತನ್ನಲ್ಲೆ ತಾನು ಇದು ಕನಸ್ಸಾ ಅಥವಾ ಭ್ರಮೇನಾ ಅಂತಾ ಮಾತಾಡ್ಕೊಂಡು ಇನ್ನೊಂದುಸಲ ಸುತ್ತ ಕಣ್ಣಾಡಿಸಿ ಎಲ್ಲರೂ ಇರುವುದನ್ನು ನೋಡಿ ಮತ್ತೆ ಪ್ರೀತಮ್ನ ನೋಡಿ ಖುಷಿಯಿಂದ ಹೋಗಿ ಅವನನ್ನ ಅಪ್ಪಿಕೊಂಡು ತಾನು ಎಲ್ಲಿದಿನಿ ಅನ್ನೋದನ್ನ ಮರೆತು ಸಂಭ್ರಮಿಸ್ತಿರ್ತಾಳೆ ಇದನ್ನೆಲ್ಲಾ ನೋಡಿ ಪ್ರೀತಮ್ ಖುಷಿಇಂದ ಎಲ್ಲರ ಮುಂದೆ ತನ್ನ ಒಡತಿಯ ಹಣೆಗೆ ಸಿಹಿ ಮುಟ್ಟಿಡ್ತಾನೆ ಹುಡುಗಿ ಅಲ್ಲೇ ಶಾಕ್ ಆಗಿ ಕಣ್ ಕಣ್ ಬಿಡ್ತೀರತಾಳೆ ಆಗ ಗೌರಿ ಅವರು ಇವರಿಬ್ಬರನ್ನ ಹೀಗೆ ಬಿಟ್ಟರೆ ಇಲ್ಲೇ ಹನಿಮೂನ್ ಮುಗಸಬಿಡ್ತಾರೆ ಬೇಗಾ ತಾಳಿ ಕಟ್ಟಿಸಿ.... ಅಂತಾ ಕಾಲೇಳೆದಾಗ ಇಬ್ಬರು ವಾಸ್ತವಕ್ಕೆ ಬರ್ತಾರೆ ಇವರಿಬ್ಬರ ಖುಷಿ ನೋಡಿ ಹಿರಿ ಜೀವಗಳು ಆನಂದ ಪಡ್ತಾರರೇ ಮದುವೆ ಅಂತೂ ಪ್ರೀತಮ್ ಅಂದು ಕೊಂದಹಾಗೆ ನೆರೆವೇರಿತು.....…
ಎಂದೆಂದಿಗೂ ನಿನ್ನು ನನ್ನವನೆ ಪ್ರೀತು ಐ ಲವ್ ಯು ಸೊ ಮಚ್.... ಲವ್ ಯು ಟು ಕಣೆ ಮುದ್ದಮ್ಮ.....…
ಹೌದು ನೀನೇ ನನ್ನ ಮದುವೆ ಆಗುತ್ತಿರುವ ಹುಡುಗ ಅಂತಾ ನನಗೆ ಗೊತ್ತಿರ್ಲಿಲ್ಲ ಗೊತ್ತಾ ಅಂತಾ ಮುಗ್ಧವಾಗಿ ಹೇಳ್ತಾಳೆ ಅದ್ಕಕೆ ಪ್ರೀತಮ್ ಗೊತ್ತಿರ್ಲಿಲ್ಲ ಅಲ್ಲ ಗೊತ್ತು ಆಗ್ಬಾರ್ದು ಅಂತಾ ಹೇಳಿದ್ದೆ ನಾನು😊 ಹೌದ..... ಅಂದ್ರೆ ನಿನಗೆ ಗೊತ್ತಿತ್ತಾ ನಾನು ಪ್ರೀತಿ ಮಾಡ್ತಿರೋದು ಎಲ್ಲ..... ಗೊತ್ತಿರದೆ ಏನು ನೀನು ನಿನ್ನ ಬಾಲ ನಾನ್ ಇಲ್ಲೇ ಇದ್ರು ಹುಡ್ಕೊಂಡು ಬರ್ತಾ ಇದ್ದಿದ್ದು ನೀನು ನನ್ನಾ ನುಂಗೋತರ ನೋಡ್ತಾ ಇದಿದ್ದು ಎಲ್ಲಾನು ಗೊತ್ತು..... ಗೊತ್ತಿದ್ರು ಯಾಕೆ ನೀನು ನಂಗೆ ಹೇಳಿಲ್ಲಾ.... ನೀನು ಹೇಳ್ತೀಯಾ ಅಂತಾ ಐದು ವರ್ಷ ಕಾದೆ ಆದ್ರೆ ಅಮ್ಮೋರಿಗೆ ಈ ಬಡಪಾಯಿ ಮೇಲೆ ಕರುಣೇನೇ ಬರ್ಲಿಲ್ಲಾ ಅದ್ಕೆ ಇತರ ಪ್ಲಾನ್ ಮಾಡಿದೆ..... 😞 ಎ ಹೋಗೋ ನೀನು ಸಿಗಲ್ಲ ಬೆರೆವರನ ಮದುವೆ ಆಗ್ತಿದಿನಾಲ ಅಂತಾ ಎಷ್ಟು ನೋವು ಅನುಭವಿಸಿದೀನಿ ಗೊತ್ತಾ ಅಲ್ಲಾ ಇದೆ ನೋವ್ ಅಲ್ಲಿ ನಾನೇನಾದ್ರೂ ಮಾಡ್ಕೊಂಡು ಸತ್ತೋಗಿದ್ರೆ ಏನ್ ಮಾಡ್ತಿದ್ದೆ..... ನಮ್ಮ್ ಹುಡುಗಿ ಏನು ಅಂತಾ ನಮಗೆ ಗೊತ್ತಿದೆ ಕಣೆ ಪೆದ್ದು ಹೀಗೆ ಮಾತಾಡ್ತಾ ನಿಂತಿರ್ತೀಯೋ ಅಥವಾ ಐದು ವರ್ಷ ಕಾದಿರೋದಕ್ಕೆ ಈಗಲಾದ್ರೂ ಮುಕ್ತಿ ಕೊಡ್ತಿಯೋ.... ನಡಿ ಅಂತಾ ತನ್ನ ರೂಮ್ಗೆ ಎತ್ಕೊಂಡ್ ಹೋಗ್ತಾನೆ ಇಬ್ಬರು ಹನಿಮೂನ್ ಮುಗಿಸಿಕೊಂಡು ಒಂದು ವರ್ಷಕ್ಕೆ ಚಂದದ ಮಗುವಿಗೆ ಜನ್ಮ ನೀಡುತ್ತಾರೆ......…
ಮುಕ್ತಾಯ.....…
ಹೇಗಿದೆ ಕಥೆ ಅಂತಾ ತಿಳಿಸಿ ಪ್ರೋತ್ಸಾಹಿಸಿ ಏನಾದ್ರೂ ತಪ್ಪಿದ್ದಲ್ಲಿ ಕ್ಷಮಿಸಿ..…
ಧನ್ಯವಾದಗಳು 🙏🙏
ಇಂತಿ
✍️ ಸಹನಾ